Monday, May 20, 2024

ಮಹಾ’ ಸಿಂಹಾಸನವೇರಲು ‘ಸೇನಾ’ನಿ ಸಿದ್ಧತೆ

ಮುಂಬೈ: ಮಹಾರಾಷ್ಟ್ರ ರಾಜ್ಯ ರಾಜಕಾರಣ ಕಳೆದ ಒಂದು ವಾರದಿಂದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.ಯಾವಗ ಏನಾಗತ್ತೋ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ . ಈಗಾಗ್ಲೆ ಫಡ್ನವಿಸ್ ಸರ್ಕಾರ ರಚಿಸಿ 4 ದಿನದ ಸುಲ್ತಾನನಾಗಿ ರಾಜೀನಾಮೆ ಕೊಟ್ಟಿದ್ದಾರೆ .
ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಉದ್ಬವ್ ಠಾಕ್ರೆ ಇಂದು ಪದಗ್ರಹಣ ಮಾಡಲಿದ್ದು, ಮೊದಲು ನಿಗದಿಗೊಳಿಸಿದ್ದ ದಿನಕ್ಕಿಂತ ಮೂರು ದಿನ ಮೊದಲೇ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ , ನೆಚ್ಚಿನ ನಾಯಕನ ಪಟ್ಟಾಭಿಷೇಕಕ್ಕೆ ಶಿವಸೇನೆ ಭರದ ಸಿದ್ದತೆಯನ್ನು ಮಾಡಿಳ್ಳುತ್ತಿದೆ,ಅದಕ್ಕಾಗಿ ಮುಂಬೈನ ಶಿವಾಜಿ ಪಾರ್ಕನಲ್ಲಿ ಕಾರ್ಯಕ್ರಮದ ಸಕಲ ಸಿದ್ದತೆಗಳನ್ನು ಮಾಡಲಾಗುತ್ತಿದೆ .
400 ರೈತರನ್ನು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಅಲ್ಲದೆ ಠಾಕ್ರೆ ಕುಟುಂಬದ ಮೊದಲ ಸಿಎಂ ಎಂಬ ಹೆಗ್ಗಳಿಕೆಗೂ ಉದ್ವವ್ ಠಾಕ್ರೆ ಪಾತ್ರವಾಗಲಿದ್ದಾರೆ 

RELATED ARTICLES

Related Articles

TRENDING ARTICLES