Monday, October 28, 2024

`ಖಾಕಿ ಬಿಟ್ಟು ರಾಜಕೀಯ ಮಾಡಲಿ’ : ಕಮಿಷನರ್ ವಿರುದ್ಧ ಡಿಕೆಶಿ ಗರಂ

ಬೆಂಗಳೂರು: ಮಧ್ಯಪ್ರದೇಶ ಶಾಸಕರ ಭೇಟಿಗೆ ಅವಕಾಶ ನೀಡದ ವಿಚಾರಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ವಿರುದ್ಧ ಕೆಪಿಸಿಸಿ ಅಧ್ಕಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದು, ಇವರು ರಾಜಕೀಯ ಮಾಡೋದಾದ್ರೆ ಖಾಕಿ ಬಿಚ್ಚಿಟ್ಟು ರಾಜಕೀಯ ಮಾಡಲಿ ಎಂದು ಹೇಳಿದ್ದಾರೆ. 

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ದಿಗ್ವಿಜಯ್ ಸಿಂಗ್ ಮತ ಕೇಳಲು ಬಂದಿದ್ದರು. ಅವರೇನು  ವೆಪನ್ ತಂದಿದ್ರಾ?  ಅವರನ್ನೇ ಅರೆಸ್ಟ್ ಮಾಡಿದ್ದಾರೆ. ಅಲ್ಲಿ ಡಿಸಿಪಿ ಅವರನ್ನು ಕೇಳಿದ್ರೆ ಕಮಿಷನರನ್ನು ಕೇಳಬೇಕು, ಕಮಿಷರನ್ನು ಕೇಳಿದ್ರೆ  ಮಹಾನಿರ್ದೇಶಕರನ್ನು ಕೇಳಬೇಕು ಅಂತ ಹೇಳ್ತಾರೆ. ಕರ್ನಾಟಕ ಪೊಲೀಸರಿಗೆ ಒಳ್ಳೆಯ ಇತಿಹಾಸ ಇದೆ. ಆದರೆ ಇಂತಹ ಅಸಮರ್ಥ ಕಮಿಷನರನ್ನು ನಾನು ಎಲ್ಲೂ ನೋಡಿಲ್ಲ. ಇವರು ರಾಜಕೀಯ ಮಾಡ್ತಾ ಇದ್ದಾರೆ. ಹೀಗೆ ರಾಜಕೀಯ ಮಾಡೋದಾದ್ರೆ ಖಾಕಿ ಬಿಚ್ಚಿಟ್ಟು ರಾಜಕೀಯ ಮಾಡಲಿ‘ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಧ್ಯಪ್ರದೇಶ ಶಾಸಕರು ಉಳಿದುಕೊಮಡಿರುವ ಹೋಟೆಲ್​ನಲ್ಲಿ ಅನುಮತಿಯಿಲ್ಲದೆ ಪ್ರತಿಭಟನೆ ಮಾಡಿದ್ದಕ್ಕೆ ದಿಗ್ವಿಜಯ್ ಸಿಂಗ್ ಅವರನ್ನು ಬಂಧಿಸಿ, ಎಫ್ಐಆರ್​ ದಾಖಲಿಸಿದ್ದರು. ಆದರೆ ಬಳಿಕ ಪೊಲೀಸರು ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಅಲ್ಲಿಂದ ಬಂದ ದಿಗ್ವಿಜಯ್ ಸಿಂಗ್ ಬಿಜೆಪಿ ವಿರುದ್ಧ ಧಿಕ್ಕಾರ ಕೂಗುತ್ತಾ ನೇರವಾಗಿ ಪೊಲೀಸ್ ಕಮಿಷನರ್ ಆಯುಕ್ತರ ಕಚೇರಿಗೆ ಬಂದರು. ಅವರೊಂದಿಗೆ ಡಿ.ಕೆ ಶಿವಕುಮಾರ್, ರಿಜ್ವಾನ್ ಅರ್ಷದ್ ಹಾಗೂ ಹ್ಯಾರೀಸ್ ಸೇರಿದಂತೆ  ಕಾಂಗ್ರೆಸ್ ಮುಖಂಡರು ಕಮಿಷನರನ್ನು ಭೇಟಿಯಾಗಲು ಹೋಗಿದ್ದರು. ಆದರೆ, ಭಾಸ್ಕರ್​ ರಾವ್ ಭೇಟಿಗೆ ಅವಕಾಶ ನೀಡದೆ, ಡಿಜಿ -ಐಜಿಪಿಯನ್ನು ಭೇಟಿಯಾಗುವಂತೆ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಕಮಿಷನರ್ ನಡೆಗೆ ಡಿಕೆಶಿ ಕೆಂಡಾಮಂಡಲರಾಗಿದ್ದಾರೆ. 

 

RELATED ARTICLES

Related Articles

TRENDING ARTICLES