ಬೆಂಗಳೂರು: ನಿನ್ನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಸಜೀವ ಬಾಂಬ್ ವಿಚಾರಕ್ಕೆ ಸಂಬಂಧಪಟ್ಟಂತೆ ಪೊಲೀಸರ ಮೇಲೆ ಅನುಮಾನ ವ್ಯಕ್ತಪಡಿಸಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿರುವ ಬಿಜೆಪಿ, ಜಿಹಾದಿಗಳ ಪರ ಯಾಕೆ ರೋದಿಸುತ್ತಿರುವುದೇಕೆ ಎಂದು ಕುಟುಕಿದೆ.
ಕುಮಾರಸ್ವಾಮಿಯವರು ಸರ್ಜಿಕಲ್ ಸ್ಟ್ರೈಕ್ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದರು. ಮಂಗಳೂರಿನಲ್ಲಿ ಸಿಎಎ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಯಾವುದೇ ಗಲಭೆಯಲ್ಲಿ ತೊಡಗಿಲ್ಲ ಎಂದು ಫೇಕ್ ಸಿಡಿಗಳನ್ನು ತಯಾರಿಸಿದ್ದರು. ಇದೀಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ದೊರೆತ ಬಾಂಬ್ ನಿಷ್ಕ್ರಿಯಗೊಳಿಸಿರೋದಕ್ಕೆ ಪೊಲೀಸರ ವಿರುದ್ಧವೇ ಸಂಶಯ ಪ್ಯಕ್ತಪಡಿಸುತ್ತಿದ್ದಾರೆ. ಜಿಹಾದಿ ಮನಸ್ಥಿತಿಯುಳ್ಳ ವ್ಯಕ್ತಿಗಳ ಪರವಾಗಿ ರೋಧನವೇಕೆ ಎಂದು ಬಿಜೆಪಿ ತನ್ನ ಅಧಿಕೃತ ಟ್ವಿಟ್ಟರ್ ಮೂಲಕ ಪ್ರಶ್ನೆ ಮಾಡಿದೆ.
✓ He doubted Surgical Strikes
✓ He released doctored CDs to show that Peaceful Protestors didn't indulge in violence
✓ Now he is blaming Police for the live bomb diffused in MangaluruIs there no end to Appeasement Politics by former CM @hd_kumaraswamy?
Why cry for Jihadis?
— BJP Karnataka (@BJP4Karnataka) January 21, 2020