ಪುಣೆ : ಮನೆಗೆ ಬರ್ಬೇಡಿ ಹೆಂಡ್ತಿ ಬೈಯ್ತಾಳೆ ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.
ಸರ್ಕಾರದಿಂದ ಅಧಿಕೃತವಾಗಿ ಬಂಗಲೆ ಇನ್ನೂ ದೊರೆಯದ ಕಾರಣ ತಮ್ಮ ಮನೆಯ ಹಾಲ್ನಲ್ಲೇ ಜನರ ಕುಂದು ಕೊರತೆಗಳನ್ನು ವಿಚಾರಿಸುತ್ತಿದ್ದಾರೆ. ಇದು ಅವರ ಪತ್ನಿ ಸುನೇತ್ರಾ ಕೋಪಕ್ಕೆ ಕಾರಣವಾಗಿದ್ದು, ನಿಮಗೆ ಬಂಗಲೆ ಸಿಗುವವರೆಗೂ ನಾನು ಮನೆಯಲ್ಲಿ ಇರುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಆದ್ದರಿಂದ ಸಣ್ಣಪುಟ್ಟ ವಿಷಯಗಳಿಗೆಲ್ಲಾ ನನ್ನನ್ನು ಭೇಟಿಯಾಗಲು ಮನೆಗೆ ಬರಬೇಡಿ ಎಂದು ಅಜಿತ್ ಪವಾರ್ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಹೆಂಡ್ತಿ ಬೈಯ್ತಾಳೆ ಮನೆಗೆ ಬರ್ಬೇಡಿ ಎಂದ ಡಿಸಿಎಂ !
TRENDING ARTICLES