Sunday, May 19, 2024

ರಾಜ್ಯದ ಇಷ್ಟೆಲ್ಲಾ ಬೆಳವಣಿಗೆಗೆ ಸಂಸದ ಶ್ರೀನಿವಾಸ ಪ್ರಸಾದ್ ಕಾರಣವಂತೆ!

ಮೈಸೂರು : ರಾಜ್ಯ ದಲ್ಲಿ ನಡೆದಿರುವ ಎಲ್ಲಾ ಬೆಳವಣಿಗೆಗೆ ಚಾಮರಾಜನಗರ ಸಂಸದ ವಿ. ಶ್ರೀನಿವಾಸ್​ ಪ್ರಸಾದ್​ ಕಾರಣವಂತೆ! ಹೀಗಂದಿದ್ದು ನಿನ್ನೆಯಷ್ಟೇ ಅಧಿಕೃತವಾಗಿ ಬಿಜೆಪಿ ಸೇರಿದ ಮಾಜಿ ಜೆಡಿಎಸ್​ ರಾಜ್ಯಾಧ್ಯಕ್ಷ, ಅನರ್ಹ ಶಾಸಕ ಹೆಚ್ ವಿಶ್ವನಾಥ್!
ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ನೇರವಾಗಿ ಮೈಸೂರು ಜಿಲ್ಲಾ ಬಿಜೆಪಿ ಕಚೇರಿಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ ರಾಜ್ಯದ ಇಷ್ಟೆಲ್ಲಾ ಬೆಳವಣಿಗೆಗೆ ಶ್ರೀನಿವಾಸ್​ ಪ್ರಸಾದ್​ ಅವರೇ ಕಾರಣ. ಶ್ರೀನಿವಾಸ್​ ಪ್ರಸಾದ್​ ಅವರ ಮುಖಾಂತರ ಯಡಿಯೂರಪ್ಪ ನನ್ನನ್ನು ಬಿಜೆಪಿಗೆ ಆಹ್ವಾನಿಸಿದರು. ಜೆಡಿಎಸ್​ ಬಿಟ್ಟು ಬಿಜೆಪಿಯನ್ನು ಅಧಿಕಾರಕ್ಕೆ ತರುವಂತೆ ಕೇಳಿಕೊಂಡರು . ಶ್ರೀನಿವಾಸ್​ ಪ್ರಸಾದ್​ ಅವರನ್ನು ಹೊರತುಪಡಿಸಿ ಬೇರೆ ಯಾರು ಕೇಳಿದ್ದರೂ ನಾನದಕ್ಕೆ ಒಪ್ಪುತ್ತಿರಲಿಲ್ಲ ಎಂದು ಹೇಳಿದರು.
ಜಗತ್ತೇ ಅಭಿವೃದ್ಧಿಯ ಕಡೆಗೆ ಮುಖ ಮಾಡಿರುವಾಗ ನಾನೊಬ್ಬ ಯಾಕೆ ಸುಮ್ಮನಿರಲಿ ? ಭಾರತ ದೇಶ ಇಂದು ಅಭಿವೃದ್ಧಿಯ ಕಡೆಗೆ ಹೋಗುತ್ತಿದೆ. ಆ ಆಭಿವೃದ್ಧಿಯಲ್ಲಿ ನಾನೂ ಕೈಜೋಡಿಸಲು ಇಚ್ಛಿಸುತ್ತಿದ್ದೇನೆ. ಹಾಗಾಗಿ ಈ ಕನಕ ಜಯಂತಿಯಂದು ನಾನೂ ಮತ್ತು ವಿಜಯ್​ ಶಂಕರ್​ ಇಬ್ಬರು ಕನಕರು ಬಿಜೆಪಿ ಮನೆಗೆ ಬಂದಿದ್ದೇವೆ ಎಂದರು.

RELATED ARTICLES

Related Articles

TRENDING ARTICLES