ಬೆಂಗಳೂರು: ಬಿಯಸ್ ಯಡಿಯೂರಪ್ಪರವರು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿ ಹಲವು ದಿನಗಳು ಕಳೆದ್ರೂ ಸಚಿವ ಸಂಪುಟ ರಚನೆಯಾಗಿರಲಿಲ್ಲ. ಇದೀಗ ಕೊನೆಗೂ ಸಂಪುಟ ರಚನೆಗೆ ಮುಹೂರ್ತ ಫಿಕ್ಸ್ ಆಗಿದೆ.
ಮೈತ್ರಿ ಸರ್ಕಾರ ಪತನವಾಗಿ ಬಿ.ಯಸ್.ಯಡಿಯೂರಪ್ಪರವರ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರ ವಹಿಸಿಕೊಂಡು ಹಲವಾರು ದಿನಗಳೇ ಕಳೆದಿದೆ. ಆದ್ರೂ ಸಂಪುಟ ರಚನೆ ಮಾಡದ ಸಿಎಂ ಬಿಯಸ್ವೈಯವರನ್ನು ಪ್ರತಿಪಕ್ಷಗಳು ಟೀಕಿಸಿದ್ದವು. ರಾಜ್ಯದಲ್ಲಿ ಭೀಕರ ಪ್ರವಾಹ ಪರಿಸ್ಥಿತಿಯಿದ್ರು ಕೂಡ ಮಂತ್ರಿಮಂಡಲದಲ್ಲಿ ಸಚಿವರೇ ಇಲ್ಲದಿರುವುದು ಟೀಕೆಗೆ ಕಾರಣವಾಗಿತ್ತು. ಇದೀಗ ಈ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸಲು ಸಿಎಂ ಬಿಯಸ್ವೈ ಆ.೧೬ ರಂದು ದೆಹಲಿಗೆ ತೆರಳಲಿದ್ದು, ಆ.೧೮ ಕ್ಕೆ ಸಚಿವರ ಪ್ರಮಾಣ ವಚನಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ಸಮಯ ನಿಗದಿಯಾಗಲಿದೆ.
ಇನ್ನು ಈ ಬಾರಿ ಸಂಪುಟದಲ್ಲಿ ಯಾರ್ಯಾರಿಗೆ ಯಾವ್ಯಾವ ಖಾತೆಗಳು ಸಿಗಬಹುದೆಂದು ಕುತೂಹಲ ಉಂಟಾಗಿದ್ದು, ಸಂಭಾವ್ಯ ಸಚಿವರ ಹಾಗೂ ಸಂಭಾವ್ಯ ಖಾತೆಗಳ ಪಟ್ಟಿ ಇಂತಿವೆ… ಗೋವಿಂದ ಕಾರಜೋಳ- ಲೋಕೋಪಯೋಗಿ, ಕೆ.ಎಸ್.ಈಶ್ವರಪ್ಪ- ಗೃಹ, ಆರ್.ಅಶೋಕ್- ಸಾರಿಗೆ, ಜಗದೀಶ್ ಶೆಟ್ಟರ್- ಕಂದಾಯ, ವಿ.ಸೋಮಣ್ಣ- ನಗರಾಭಿವೃದ್ಧಿ, ಶ್ರೀರಾಮುಲು – ಸಮಾಜ ಕಲ್ಯಾಣ, ಡಾ.ಅಶ್ವತ್ಥನಾರಾಯಣ-ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಶಿಕಲಾ ಜೊಲ್ಲೆ- ಮಹಿಳಾ ಮತ್ತು ಮಕ್ಕಳ ಕಲ್ಯಾಣ, ರೇಣುಕಾ ಚಾರ್ಯ- ಪೌರಾಡಳಿತ, ಉಮೇಶ್ ಕತ್ತಿ – ಕೃಷಿ, ಬಾಲಚಂದ್ರ ಜಾರಕಿಹೊಳಿ- ಕಾರ್ಮಿಕ ಇಲಾಖೆ, ಶಿವನಗೌಡ ನಾಯಕ್ – ಸಣ್ಣ ಕೈಗಾರಿಕೆ, ಯಸ್.ಅಂಗಾರ – ಸಣ್ಣ ನೀರಾವರಿ, ಕೋಟಾ ಶ್ರೀನಿವಾಸ ಪೂಜಾರಿ- ಮುಜರಾಯಿ ಮತ್ತು ಯೋಜನೆ, ಕೆ.ಜಿ.ಬೋಪಯ್ಯ- ಉನ್ನತ ಶಿಕ್ಷಣ, ಮಾಧುಸ್ವಾಮಿ- ಕಾನೂನು ಮತ್ತು ಸಂಸದೀಯ ವ್ಯವಹಾರ.