Sunday, October 27, 2024

ಫೈನಾನ್ಸ್ ಬಿಲ್ ಪಾಸ್ ಮಾಡೇ ಮಾಡ್ತೀವಿ : ಸಿಎಂ ಬಿಎಸ್​ವೈ

ಬೆಂಗಳೂರು : ಈ ತಿಂಗಳ ಅಂತ್ಯದೊಳಗೆ ಹಣಕಾಸು ಮಸೂದೆ ಅಂಗೀಕಾರ ಆಗಿಯೇ ಆಗುತ್ತದೆ ಅಂತ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಈ ತಿಂಗಳ ಅಂತ್ಯದೊಳಗೆ ರಾಜ್ಯದ ಫೈನಾನ್ಸ್ ಬಿಲ್ ಪಾಸ್ ಮಾಡಲೇ ಬೇಕು, ಇಲ್ಲವಾದರೆ ಸರ್ಕಾರಿ ನೌಕರಿಗೆ ಸಂಬಳವಾಗುವುದಿಲ್ಲ. ನಾಳೆ ನಾವು ಸದನದಲ್ಲಿ ವಿಶ್ವಾಸಮತ ಸಾಬೀತು ಮಾಡೇ ಮಾಡುತ್ತೇವೆ. ನೂರಕ್ಕೆ ನೂರು ಸೋಮವಾರ ಫೈನಾನ್ಸ್ ಬಿಲ್ ಪಾಸ್ ಆಗಿಯೇ ಆಗುತ್ತದೆ ಎಂದರು.
ಮೈತ್ರಿ ಸರ್ಕಾರದ ಅವಧಿಯ ಮಂಡನೆ ಮಾಡಿರುವ ಫೈನಾನ್ಸ್ ಬಿಲ್​​ನಲ್ಲಿ ಒಂದು ಅಲ್ಪವಿರಾಮ, ಪೂರ್ಣವಿರಾಮ ಚಿಹ್ನೆ ಕೂಡ ಬದಲಿಸಿಲ್ಲ, ಅದೇ ಬಿಲ್ ಅನ್ನು ಪಾಸ್ ಮಾಡುತ್ತೇವೆ ಅಂತ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES