ಬೆಂಗಳೂರು : ಸತ್ತರೂ ಜೆಡಿಎಸ್ ಪಕ್ಷದ ಜೊತೆ ಹೋಗಲ್ಲ ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ರೇಣುಕಾಚಾರ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಪ್ಪ-ಮಕ್ಕಳ ಆಟ 20-20 ಸರ್ಕಾರ ಇದ್ದಾಗಲೇ ನೋಡಿದ್ವಿ. ಸುಳ್ಳು ಸುದ್ದಿ ಹಬ್ಬಿಸೋದ್ರಲ್ಲಿ ಕುಮಾರಸ್ವಾಮಿ ನಿಸ್ಸೀಮರು ಎಂದು ಜೆಡಿಎಸ್ ವಿರುದ್ಧ ಗುಡುಗಿದ್ದಾರೆ. ದೋಸ್ತಿ ಶಾಸಕರನ್ನು ಹೆದರಿಸಿಲು ಬಿಜೆಪಿ ಜೊತೆ ಹೊಂದಾಣಿಕೆ ಎಂದು ಹೇಳುತ್ತಿದ್ದಾರೆ. ಆದ್ರೆ ನಾವು ಅವರ ಜೊತೆ ಹೋಗ್ತೀವಾ ಅಂತಾ ರೇಣುಕಾಚಾರ್ಯ ಕಿಡಿಕಾರಿದ್ದಾರೆ.