Sunday, October 27, 2024

ಇನ್ನೂ 5 ಶಾಸಕರು ರಾಜೀನಾಮೆ?

ಬೆಂಗಳೂರು: ಈಗಾಗಲೇ 14 ಮಂದಿ ಶಾಸಕರ ರಾಜೀನಾಮೆಯಿಂದ ತತ್ತರಿಸಿ ಹೋಗಿರುವ ದೋಸ್ತಿ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈಗಾಗಲೇ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರನ್ನು ಮನವೊಲಿಸಲು ದೋಸ್ತಿ ನಾಯಕರು ಕಸರತ್ತು ನಡೆಸುತ್ತಿದ್ರೆ, ಇದೀಗ ಮತ್ತೆ 6 ಜನ ಶಾಸಕರು ರಾಜೀನಾಮೆ ನೀಡಲು ನಿರ್ಧರಿಸಿರುವುದು ಸರ್ಕಾರಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಓರ್ವ ಸಚಿವ ಸೇರಿ 5 ಮಂದಿ ಶಾಸಕರು ರಾಜೀನಾಮೆ ನೀಡುವ ಸಾಧ್ಯತೆಯಿದೆ. ವಸತಿ ಸಚಿವ ಎಂ.ಟಿ.ಬಿ ನಾಗರಾಜ್​, ಶಾಸಕರಾದ ಸುಬ್ಬಾ ರೆಡ್ಡಿ(ಬಾಗೆಪಲ್ಲಿ), ಅಂಜಲಿ ನಿಂಬಾಳ್ಕರ್​(ಖಾನಾಪುರ), ಡಾ.ಸುಧಾಕರ್​(ಚಿಕ್ಕಬಳ್ಳಾಪುರ), ಬಿ.ಶಿವಣ್ಣ(ಆನೇಕಲ್​) ರವರು ಸ್ಪೀಕರಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES

Related Articles

TRENDING ARTICLES