ಬೆಂಗಳೂರು : 87ನೇ ವಯಸ್ಸಿನಲ್ಲೂ ಹೋರಾಟಕ್ಕೆ ಸಿದ್ಧ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ ದೇವೇಗೌಡ್ರು ಹೇಳಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ”ಬಿಳಿ, ಕರಿ ಕನ್ನಡಕ ಹಾಕಿಕೊಳ್ಳದೇ ಹೋರಾಡಿರುವೆ. ಸೋಲಿನಿಂದ ಕಂಗೆಡಲ್ಲ, ಯಾರು ಏನ್ ಮಾಡಿದ್ದಾರೆ ಅಂತ ಗೊತ್ತು. ನಾನ್ಯಾರ ಮನಸ್ಸು ನೋಯಿಸಲ್ಲ. 87ನೇ ವಯಸ್ಸಿನಲ್ಲೂ ಹೋರಾಟಕ್ಕೆ ಸಿದ್ಧ . ಧೂಳಿನಿಂದ ಎದ್ದು ಬರುವೆ. ನಿಷ್ಠಾವಂತ ಕಾರ್ಯಕರ್ತರನ್ನ ಗುರುತಿಸಿ ಪಕ್ಷ ಸಂಘಟನೆ ಮಾಡುವೆ. ಲಿಂಗಾಯತ, ಕುರುಬ ಯಾರೇ ಆಗ್ಲಿ, ಗೆದ್ದವರು ನಿಷ್ಠರಾಗಿರಿ” ಎಂದರು.
ಪ್ರಾದೇಶಿಕ ಪಕ್ಷ ಉಳಿಸಲು ಪಣ ತೊಟ್ಟಿರುವೆ. ‘ಸೋತಿರುವ ಬಗ್ಗೆ ಹೆಮ್ಮೆಯಿದ್ದು, ಪಕ್ಷ ಸಂಘಟನೆಗೆ ಒತ್ತು’. ದೇಶದ 17 ರಾಜ್ಯಗಳಲ್ಲಿ ಕಾಂಗ್ರೆಸ್ ಇಲ್ಲ. ಇದ್ರಿಂದ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಪೆಟ್ಟು ಬಿದ್ದಿದೆ ಅಂತ ಹೇಳಿದ್ರು.
87 ನೇ ವಯಸ್ಸಿನಲ್ಲೂ ಹೋರಾಟಕ್ಕೆ ಸಿದ್ಧ ಎಂದ್ರು ದೇವೇಗೌಡ್ರು..!
TRENDING ARTICLES