Sunday, February 2, 2025

ಮೈತ್ರಿ ಧರ್ಮ ನನ್ನ ಬಾಯಿ ಕಟ್ಟಿಹಾಕಿದೆ : ಸಿದ್ದರಾಮಯ್ಯ

ಬೆಂಗಳೂರು : ಮೈತ್ರಿ ಧರ್ಮ ನನ್ನ ಬಾಯಿ ಕಟ್ಟಿಹಾಕಿದೆ ಅಂತ ಮಾಜಿ ಮುಖ್ಯಮಂತ್ರಿ, ಸಿಎಲ್​ಪಿ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಜೆಡಿಎಸ್​​ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್​ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. ವಿಶ್ವನಾಥ್ ಇಂಥಾ ಕಿಡಿಗೇಡಿತನದ ಹೇಳಿಕೆಗಳಿಗೆ ಕುಖ್ಯಾತರು. ಮೊದಲು ಜಿಟಿಡಿ, ಈಗ ವಿಶ್ವನಾಥ್, ಮುಂದೆ ಯಾರೋ ಗೊತ್ತಿಲ್ಲ. ಬೇಜವಾಬ್ದಾರಿ ಹೇಳಿಕೆ ಬಗ್ಗೆ ಜೆಡಿಎಸ್​​​ ವರಿಷ್ಠರು ಗಮನಹರಿಸಬೇಕು. ಮೈತ್ರಿ ಧರ್ಮ ನನ್ನ ಬಾಯಿ ಕಟ್ಟಿಹಾಕಿದೆ ಎಂದು ಕಿಡಿಕಾರಿದ್ದಾರೆ.
”ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆಗಬೇಕು ಅನ್ನೋ ಕೆಲವು ಕಾಂಗ್ರೆಸ್​ ಶಾಸಕರ ಕೋರಸ್ ಚಮಚಗಿರಿ ಅಷ್ಟೇ. ಈ ಚೇಷ್ಟೆಯ ವರ್ತನೆಯನ್ನು ಅವ್ರು ನಿಲ್ಲಿಸಬೇಕು. ಸಿದ್ದರಾಮಯ್ಯ ಜನಪರ ಸಿಎಂ ಆಗಿರಲಿಲ್ಲ. ಅವರ ಆಡಳಿತದಲ್ಲಿ ವಿಶೇಷತೆ ಏನಿದೆ? ಅವರು ಅರಸು ಅವರಿಗಿಂತಾ ಗ್ರೇಟಾ?” ಅಂತ ವಿಶ್ವನಾಥ್ ಹೇಳಿದ್ದರು.

RELATED ARTICLES

Related Articles

TRENDING ARTICLES