Saturday, October 26, 2024

ಎಲೆಕ್ಷನ್​ ಅಖಾಡದಲ್ಲಿ ಗಂಭೀರ್, ವಿಜೇಂದರ್..!

ಭಾರತದ ಮಾಜಿ ಕ್ರಿಕೆಟಿಗ, 2011ರ ವರ್ಲ್ಡ್​ಕಪ್ ಹೀರೋ ಗೌತಮ್ ಗಂಭೀರ್​ ಮತ್ತು 2008ರ ಬೀಜಿಂಗ್ ಒಲಂಪಿಕ್​ನ ಕಂಚಿನ ಪದಕ ವಿಜೇತ ಬಾಕ್ಸರ್​ ವಿಜೇಂದರ್​​ ಸಿಂಗ್​ ಲೋಕಸಭಾ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.
ಗೌತಮ್ ಗಂಭೀರ್​ ಅವರು ಪೂರ್ವ ದೆಹಲಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ, ವಿಜೇಂದರ್ ಸಿಂಗ್ ದೆಹಲಿ ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
ಗೌತಮ್ ಗಂಭೀರ್ ಇತ್ತೀಚೆಗಷ್ಟೇ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದರು. ಅವರಿಗೆ ಬಿಜೆಪಿ ಪೂರ್ವ ದೆಹಲಿ ಕ್ಷೇತ್ರದಿಂದ ಟಿಕೆಟ್​ ನೀಡಿದೆ.
ಇನ್ನು ಕಾಂಗ್ರೆಸ್​ ವಿಜೇಂದರ್ ಸಿಂಗ್ ಅವರನ್ನು ದೆಹಲಿ ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ವಿಜೇಂದರ್​ ಅವರ ಹರಿಯಾಣದಲ್ಲಿನ ಪೊಲೀಸ್​ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರು ಬಿಜೆಪಿಯ ಹಾಲಿ ಸಂಸದ ರಮೇಶ್ ಬಿಧೂರಿ ಅವರ ವಿರುದ್ಧ ಅಖಾಡಕ್ಕೆ ಇಳಿದಿದ್ದಾರೆ.

RELATED ARTICLES

Related Articles

TRENDING ARTICLES