Saturday, October 26, 2024

ಲಿಂಗಾಯತ ಸಮಾಜದ ಬಗ್ಗೆ ಡಿಕೆಶಿ ಮಾತಾಡೋ ಅಗತ್ಯವಿಲ್ಲ: ವಿನಯ್ ಕುಲಕರ್ಣಿ

ಹುಬ್ಬಳ್ಳಿ: ಪ್ರಭಾವಿ ಸಚಿವ ಡಿ.ಕೆ. ಶಿವಕುಮಾರ್​ ವಿರುದ್ಧ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಆಗಿರುವ ವಿನಯ್​ ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೊದಲು ಎಂ.ಬಿ. ಪಾಟೀಲ್​ ಅವರೂ ಡಿಕೆಶಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೀಗ ವಿನಯ್​ ಕುಲಕರ್ಣಿ ಕೂಡಾ ಡಿಕೆಶಿ ವಿರುದ್ಧ ಕಿಡಿಕಾರಿದ್ದಾರೆ.

ಲಿಂಗಾಯತ ಪ್ರತ್ಯೇಕತೆ ಬಗ್ಗೆ ಡಿಕೆಶಿ ಹೇಳಿಕೆಗಳಿಗೆ ವಿನಯ್​ ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಲಿಂಗಾಯತ ಹೋರಾಟಕ್ಕೂ ಡಿಕೆಶಿಗೂ ಸಂಬಂಧವೇ ಇಲ್ಲ. ಲಿಂಗಾಯತ ಸಮಾಜದ ಬಗ್ಗೆ ಡಿಕೆಶಿ ಮಾತಾಡೋ ಅಗತ್ಯವೇ ಇರಲಿಲ್ಲ. ಡಿಕೆಶಿ ಗೌಡರ ಸಮುದಾಯದವರು. ಅವರ ಸಮಾಜದ ಬಗ್ಗೆ ನಾವು ಮಾತಾಡಿದ್ರೆ ತಪ್ಪಾಗುತ್ತೆ ಎಂದು ಡಿ.ಕೆ. ಶಿವಕುಮಾರ್ ಅವರನ್ನು ವಿನಯ್​ ಕುಲಕರ್ಣಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES