Saturday, October 26, 2024

ಕಾಂಗ್ರೆಸ್ ಸರ್ಜಿಕಲ್​ ಸ್ಟ್ರೈಕ್ ಮಾಡಿದಾಗ ಮೋದಿ ಹುಟ್ಟಿರ್ಲಿಲ್ಲ: ಸಿದ್ದರಾಮಯ್ಯ

ಬಳ್ಳಾರಿ: ಕಾಂಗ್ರೆಸ್ ಸರ್ಜಿಕಲ್ ಸ್ಟ್ರೈಕ್ ಮಾಡಿದಾಗ ಮೋದಿ ಹುಟ್ಟಿರಲಿಲ್ಲ. ನರೇಂದ್ರ ಮೋದಿ ನನಗಿಂತ ಸಣ್ಣವರು. 1971ರಲ್ಲಿ ಯುದ್ಧ ಆದಾಗ ನಾವು ಗೆದ್ವಿ. ಬಾಂಗ್ಲಾದೇಶ ಉದಯ ಆದಾಗ ನೀವೆಲ್ಲಿದ್ರಿ? ಮೋದಿ ಉಗ್ರರ ವಿರುದ್ಧ ಗನ್ ಹಿಡಿದು ಹೋರಾಡಿದ್ರಾ..? ನಮ್ಮ ಸೈನಿಕರು ಯುದ್ಧ ಮಾಡಿದ್ದು, ಆ ಕೀರ್ತಿ ಅವರಿಗೆ ಸಲ್ಲಬೇಕು ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬಳ್ಳಾರಿ ಸಿರಗುಪ್ಪದಲ್ಲಿ ಕೊಪ್ಪಳ ಮೈತ್ರಿ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್​​ ಪರ ಪ್ರಚಾರ ನಡೆಸಿದ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಪಾಕಿಸ್ತಾನ ಸೋತ್ರೆ ಕಾಂಗ್ರೆಸ್‌ನವರಿಗೆ ಕಣ್ಣೀರು ಬರುತ್ತೆ ಅಂತಿರಾ? ಪ್ರಧಾನಿಯಾಗಿ ಬಾಯಿಗೆ ಬಂದಂಗೆ ಮಾತಾಡ್ತಿರಲ್ಲಾ? ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದು ಬರ್ಲಿಲ್ವಾ? ಇಷ್ಟೆಲ್ಲಾ ಸುಳ್ಳು ಹೇಳೋ ಮೋದಿಗೆ ಓಟ್ ಹಾಕಬೇಕಾ?” ಅಂತ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಇತಿಹಾಸ ಗೊತ್ತೇನ್ರಿ ನಿಮಗೆ ಅಂತ ಪ್ರಶ್ನಿಸಿರೋ ಸಿದ್ದರಾಮಯ್ಯ ಅವರು, “ಒಂದು ದಾಳಿ ಮಾಡಿದಾಗ ನೀವು ದೇಶಭಕ್ತರೇ..? ಮೋದಿ ನಾಥೂರಾಮ್ ಗೋಡ್ಸೆ ಅವರ ವಂಶಕ್ಕೆ ಸೇರಿದವರು. ನಿಮ್ಮಿಂದ  ನಾವು ದೇಶಭಕ್ತಿ ಕಲಿಯಬೇಕಾಗಿಲ್ಲ. ಸ್ವಾತಂತ್ರ್ಯ ಹೋರಾಟ ಪ್ರಾರಂಭವಾದಾಗ ಮೋದಿ ಹುಟ್ಟಿರಲಿಲ್ಲ. ಕಾಂಗ್ರೆಸ್ ಸ್ವಾತಂತ್ರ್ಯ ತರಲಿಲ್ಲ ಅಂದ್ರೆ ಮೋದಿ ಹೇಗೆ ಪ್ರಧಾನಿಯಾಗ್ತಿದ್ರು? ಸ್ವಾತಂತ್ರ್ಯಕ್ಕಾಗಿ ಸಾವಿರಾರು ಜನ ಪ್ರಾಣ ತ್ಯಾಗ ಮಾಡಿದ್ದಾರೆ. ದೇಶಕ್ಕಾಗಿ ಬಿಜೆಪಿಯವರು ಯಾರಾದ್ರೂ ಸತ್ತಿದ್ದಾರಾ?”  ಅಂತ ಪ್ರಶ್ನಿಸಿದ್ದಾರೆ.

RELATED ARTICLES

Related Articles

TRENDING ARTICLES