Thursday, April 25, 2024

ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ್​ ಭೇಟಿಯಾದ ಬಿಜೆಪಿ ಮುಖಂಡ..!

ಬಾಗಲಕೋಟೆ : ಬಿಜೆಪಿ ಮುಖಂಡರೊಬ್ಬರು ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ್ ಅವರನ್ನು ಭೇಟಿ ಮಾಡಿದ್ದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಮಾಜಿ ಸಚಿವ ಮುರಗೇಶ್ ನಿರಾಣಿ ಅವರ ಸಹೋದರ ಸಂಗಮೇಶ್​ ನಿರಾಣಿ ಅವರು ವೀಣಾ ಕಾಶಪ್ಪನವರ್ ಅವರನ್ನು ಭೇಟಿಯಾಗಿರೋ ಫೋಟೋ ಬಾಗಲಕೋಟೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸದ್ದು ಮಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ಭೇಟಿ ಕ್ಷೇತ್ರದಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದ್ದು, ಬಿಜೆಪಿ ಅಭ್ಯರ್ಥಿ ಪಿ.ಸಿ ಗದ್ದಿಗೌಡರ್​​ಗೆ ಶಾಕ್ ಆಗಿದೆ.

RELATED ARTICLES

Related Articles

TRENDING ARTICLES