Thursday, April 25, 2024

ಸಾವಿನ ಮನೆಯಲ್ಲಿ ಸಾಂತ್ವನ ಹೇಳಿದ ಕಪಿರಾಯ..!

ಗದಗ : ಪ್ರಾಣಿಗಳಲ್ಲಿರೋ ಪ್ರೀತಿ, ಪ್ರೀತಿಸೋ ಗುಣ ಮನುಷ್ಯರಲ್ಲಿ ಇಲ್ಲ..! ಮೂಕಪ್ರಾಣಿಗಳು ಬಾಯಿ ಮಾತಲ್ಲಿ ಪ್ರೀತಿಯನ್ನು ಹೇಳಿಕೊಳ್ಳಲ್ಲ, ಅವು ಮನಸ್ಸಲ್ಲಿ ಬೆಟ್ಟದಷ್ಟು ಪ್ರೀತಿ, ಕಾಳಜಿ ಇಟ್ಕೊಂಡಿರ್ತವೆ.
ಇಲ್ಲಿ ಇದೆಲ್ಲಾ ಹೇಳೋಕೆ ಕಾರಣ, ಒಂದು ಪುಟ್ಟ ಕೋತಿ! ಈ ಕೋತಿ ಅಂಥಾದ್ದೇನು ಮಾಡ್ತು ಅಂತ ತಿಳಿದ್ರೆ, ಇದನ್ನು ಓದಿದ್ರೆ ನೀವು ಖಂಡಿತಾವಾಗಿಯೂ ಮೂಗಿನ ಮೇಲೆ ಬೆರಳಿಟ್ಟುಕೊಳ್ತೀರಿ…ನಿಮ್ಗೆ ಬಹಳ ಅಚ್ಚರಿ ಆಗುತ್ತೆ. ಕೋತಿ ಸಾವಿನ ಮನೆಗೆ ಹೋಗಿ ನೋವಿನಲ್ಲಿದ್ದವರ ಕಣ್ಣೀರು ಒರೆಸುವ ಕೆಲಸ ಮಾಡಿದೆ.
ಹೌದು, ಗದಗದ ನರಗುಂದ ಪಟ್ಟಣದಲ್ಲಿ ಇಂಥಾ ಒಂದು ನಂಬಲಸಾಧ್ಯವಾದ ಅಪರೂಪದ ಘಟನೆ ನಡೆದಿದೆ. ದೇವೇಂದ್ರಪ್ಪ ಕಮ್ಮಾರ್ ಅನ್ನೋರು ವಿಧಿವಶರಾಗಿದ್ದು, ಅವರ ಮನೆಯಲ್ಲಿ ದುಃಖ ಮಡುಗಟ್ಟಿದೆ. ಕುಟುಂಬಸ್ಥರು ಪಾರ್ಥಿವ ಶರೀರದ ಮುಂದೆ ಕಣ್ಣೀರಿಡುತ್ತಿದ್ದಾಗ ಅಲ್ಲಿಗೆ ಬಂದ ಕಪಿ ದುಃಖದಲ್ಲಿರೋರ ಕಣ್ಣೀರನ್ನು ಒರೆಸಿದೆ. ತನ್ನದೇ ಭಾಷೆಯಲ್ಲಿ ಅವರಿಗೆ ಸಮಾಧಾನ ಮಾಡಿದೆ. ಅಲ್ಲಿ ಸೇರಿದ್ದ ಯಾರಿಗೂ ತೊಂದರೆ ಕೊಡದೇ ತನ್ನಪಾಡಿಗೆ ತಾನು ಕುಟುಂಬದವರ ಕಣ್ಣೀರು ಒರೆಸಿ, ಸಾಂತ್ವನ ಹೇಳಿದೆ. ಸದ್ಯ ಈ ಕರುಣಾಮಹಿ ಕಪಿರಾಯನ ವಿಡಿಯೋ ಸಖತ್ ಸದ್ದು ಮಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಇದೀಗ ಇದರದ್ದೇ ಸೌಂಡು.

https://www.facebook.com/powertvnews/videos/430109541078360/

RELATED ARTICLES

Related Articles

TRENDING ARTICLES