ಮಂಡ್ಯ : ಜೆಡಿಎಸ್ ಅವರು ಏನ್ ಬೇಕಾದ್ರು ಕ್ರಿಯೇಟ್ ಮಾಡ್ತಾರೆ ಅಂತ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಕಿಡಿಕಾರಿದ್ದಾರೆ.
ಜೆಡಿಎಸ್ ಮುಖಂಡರ ಮನೆ ಮೇಲೆ ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಐಟಿ ದಾಳಿಗೂ ನಂಗೂ ಸಂಬಂಧವಿಲ್ಲ ಎಂದರು. ಬಿಜೆಪಿ ಜೊತೆ ಸಭೆ ನಡೆಸಿರೀ ಆಡಿಯೋ ಬಿಡುಗಡೆ ವಿಚಾರಕ್ಕೆ ಸಂಬಂಧಪಟ್ಟಂತೆ, ‘ಜೆಡಿಎಸ್ ಅವರು ಏನ್ ಬೇಕಾದ್ರೂ ಕ್ರಿಯೇಟ್ ಮಾಡ್ತಾರೆ. ಅವರು ಏನ್ ಬೇಕಾದ್ರು ಮಾಡ್ಲಿ ನನಗೆ ಚಿಂತೆ ಇಲ್ಲ’ ಎಂದಿದ್ದಾರೆ.