Thursday, April 25, 2024

ರೇವಣ್ಣ, ಪುಟ್ಟರಾಜು ಆಪ್ತರಿಗೆ ಐಟಿ ಶಾಕ್​​..!

ಹಾಸನ/ಮಂಡ್ಯ : ಚುನಾವಣೆ ಹೊಸ್ತಿಲಲ್ಲಿ ಜೆಡಿಎಸ್​ಗೆ ಐಟಿ ಅಧಿಕಾರಿಗಳು ಮತ್ತೊಮ್ಮೆ ಶಾಕ್​ ನೀಡಿದ್ದಾರೆ. ಹಾಸನ ಮತ್ತು ಮಂಡ್ಯದಲ್ಲಿ ಐಟಿ ದಾಳಿ ನಡೆದಿದೆ.
ಹಾಸನದಲ್ಲಿ ಸಚಿವ ಹೆಚ್.ಡಿ ರೇವಣ್ಣ ಅವರ ಆಪ್ತ, ಹೆಚ್​ಡಿಸಿಸಿ ಬ್ಯಾಂಕ್​ ನಿರ್ದೇಶಕ ಕಾರ್ಲೆ ಇಂದ್ರೇಶ್​, ವಿಧಾನ ಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಾಂ,ಹೆಚ್​ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊನ್ನವಳ್ಳಿ ಸತೀಶ್, ಜಿ.ಪಂ ಮಾಜಿ ಸದಸ್ಯ ಪಾಪಣ್ಣಿ ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜಿಲ್ಲಾಪಂಚಾಯತಿ ಮಾಜಿ ಅಧ್ಯಕ್ಷ ಪಾಪಣ್ಣಿ ಹೆಚ್​.ಡಿ ದೇವೇಗೌಡರ ತಮ್ಮನ ಮಗ.
ಅದೇರೀತಿ ಮಂಡ್ಯದಲ್ಲಿಯೂ ಐಟಿ ಅಧಿಕಾರಿಗಳು ಮತ್ತೆ ದಾಳಿ ನಡೆಸಿದ್ದಾರೆ. ಜಿಪಂ ಅಧ್ಯಕ್ಷೆ ನಾಗರತ್ನ ಪತಿ ಸ್ವಾಮಿಗೆ ಸೇರಿದ ಸೋಮನಹಳ್ಳಿಯಲ್ಲಿರುವ ಸೋಮೇಶ್ವರ ಫರ್ಟಿಲೈಜರ್ ಕಂಪನಿ ಮೇಲೆ ಐಟಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಸ್ವಾಮಿ ಮೈಸೂರು ವಲಯದ ಜೆಡಿಎಸ್​ ವೀಕ್ಷಕರು.
ಇನ್ನು ಸಚಿವ ಪುಟ್ಟರಾಜು ಅವರ ಬೆಂಬಲಿಗ, ಜಿಪಂ ಸದಸ್ಯ ತಿಮ್ಮೇಗೌಡ ಮನೆ, ಪೆಟ್ರೋಲ್​ ಬಂಕ್​, ಕಚೇರಿಗಳಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES