Friday, March 29, 2024

ಕ್ರಮ ಸಂಖ್ಯೆ 20 -ಕುಮಾರಣ್ಣಗೆ ಆಪತ್ತು : ಯಶ್ ಪ್ರಚಾರದ ವೇಳೆ ಅಭಿಮಾನಿಗಳ ಘೋಷಣೆ..!

ಮಂಡ್ಯ : ದೇಶದ ಗಮನಸೆಳೆದಿರೋ ಮಂಡ್ಯ ರಣಕಣದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪರ ರಾಕಿಂಗ್​ ಸ್ಟಾರ್ ಯಶ್ ಇಂದೂ ಕೂಡ ಪ್ರಚಾರ ಮುಂದುವರೆಸಿದ್ದಾರೆ. ಯಶ್ ಪ್ರಚಾರದ ವೇಳೆ ‘ಕ್ರಮಸಂಖ್ಯೆ 20, ಕುಮಾರಣ್ಣಂಗೆ ಆಪತ್ತು’ ಅನ್ನೋ ಘೋಷಣೆಯನ್ನು ಅಭಿಮಾನಿಗಳು ಕೂಗಿದ್ರು.
ಪ್ರಚಾರದ ವೇಳೆ ಮಾತನಾಡಿದ ಯಶ್, ”ನಾಲ್ವರು ಸುಮಲತಾರನ್ನ ಯಾಕೆ ನಿಲ್ಲಿಸಿದ್ದಾರೆ. 4 ಸುಮಲತಾ ಹೆಸರಿರುವವರನ್ನು ನಿಲ್ಲಿಸಿದ್ದಾರೆ. ನಿಮಗೆ ಗೊತ್ತು ಕನ್​ಫ್ಯೂಸ್​ ಆಗ್ಬೇಡಿ.. ಕನ್​ಫ್ಯೂಸ್​ ಆಗ್ಬೇಡಿ. ನಂಗೊತ್ತು ನೀವ್​ ಕನ್​ಫ್ಯೂಸ್​ ಆಗಲ್ಲ. ಕನ್​ಫ್ಯೂಸ್ ಆಗೋಕೆ ಇಲ್ಯಾರು ದಡ್ಡರಿಲ್ಲ. ಕ್ರಮಸಂಖ್ಯೆ 20ಕ್ಕೆ ಮತ ನೀಡಿ” ಎಂದು ಯಶ್​ ಮನವಿ ಮಾಡಿದ್ರು.
ಯಶ್ ಕ್ರಮಸಂಖ್ಯೆ 20 ಅಂದಾಗ ಅಭಿಮಾನಿಗಳು ಕುಮಾರಣ್ಣನಿಗೆ ಆಪತ್ತು ಎಂದು ಘೋಷಣೆ ಕೂಗಿದರು. ಆಗ ಯಶ್​ ಹಾಗೆಲ್ಲಾ ಹೇಳೋದು ಬೇಡ ಎಂದರು.

RELATED ARTICLES

Related Articles

TRENDING ARTICLES