Saturday, April 20, 2024

ಧಾರವಾಡದಲ್ಲಿ ವಿನಯ್​ ಕುಲಕರ್ಣಿಗೆ ಕಾಂಗ್ರೆಸ್​ ಟಿಕೆಟ್​ – ಇಂದು ನಾಮಪತ್ರ ಸಲ್ಲಿಕೆ

ಧಾರವಾಡ: ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಲ್ಲಿ ಮೂಡಿದ ಟಿಕೆಟ್ ಬಿಕ್ಕಟ್ಟಿಗೆ ಕೊನೆಗೂ ತೆರೆಬಿದ್ದಿದೆ. ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಟಿಕೆಟ್​ ನೀಡಲು ನಿರ್ಧರಿಸಿದ್ದು, ತಡರಾತ್ರಿ ಅಭ್ಯರ್ಥಿ ಹೆಸರು ಅಂತಿಮಗೊಳಿಸಿದೆ. ಟಿಕೆಟ್ ಘೋಷಣೆ ಬೆನ್ನಲ್ಲೆ ವಿನಯ್ ಕುಲಕರ್ಣಿಗೆ ಬಿ ಫಾರ್ಮ್​ ರವಾನೆ ಮಾಡಲಾಗಿದೆ. ಶಾಕೀರ್ ಸನದಿಗೆ ಟಿಕೆಟ್ ಕಾಂಗ್ರೆಸ್​ ಟಿಕೆಟ್ ಕೈ ತಪ್ಪಿದೆ. ವಿನಯ್​ ಕುಲಕರ್ಣಿ ಹಾಗೂ ಶಾಕೀರ್​ ಸನದಿ ಇಬ್ಬರೂ ಧಾರವಾಡ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಇದೀಗ ವಿನಯ್​ ಕುಲಕರ್ಣಿಗೆ ಟಿಕೆಟ್​ ನೀಡೋ ಮೂಲಕ ಧಾರವಾಡದಲ್ಲಿ ಟಿಕೆಟ್​ ಗೊಂದಲಕ್ಕೆ ಕಾಂಗ್ರೆಸ್​ ತೆರೆ ಎಳೆದಿದೆ.

ನಿನ್ನೆಯವರೆಗೂ ಟಿಕೆಟ್​ ಖಚಿತವಾಗದಿದ್ದಕ್ಕೆ ಅಸಮಾಧಾನಗೊಂಡಿದ್ದ ಮಾಚಿ ಸಚಿವ ವಿನಯ್​ ಕುಲಕರ್ಣಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಮುಂದಾಗಿದ್ದರು. ಇಂದು ಕಾಂಗ್ರೆಸ್​ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. “ಧಾರವಾಡದ ಟಿಕೆಟ್ ಗೊಂದಲ ನಿವಾರಣೆಯಾಗುತ್ತೆ. ಸಂಜೆ ವೇಳೆಗೆ ಅಭ್ಯರ್ಥಿ ಆಯ್ಕೆಯನ್ನು ಹೈಕಮಾಂಡ್ ಅಂತಿಮಗೊಳಿಸಲಿದೆ” ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಿನ್ನೆ ಹುಬ್ಬಳ್ಳಿಯಲ್ಲಿ ಸಭೆ ನಡೆಸಿದ ನಂತರ ಹೇಳಿಕೆ ನೀಡಿದ್ದರು.

RELATED ARTICLES

Related Articles

TRENDING ARTICLES