Saturday, April 20, 2024

ಮೋದಿ ವಿರುದ್ಧ ಕಣಕ್ಕಿಳಿಯುತ್ತಾರಾ ಟ್ರಬಲ್​ ಶೂಟರ್​ ಡಿಕೆಶಿ?

ಬೆಂಗಳೂರು : ‘ಲೋಕ’ ರಣಕಣ ಕಾವೇರುತ್ತಿದೆ. ರಾಜ್ಯದ ಒಟ್ಟು 28 ಕ್ಷೇತ್ರಗಳಲ್ಲಿ ಬಿಜೆಪಿ ಸದ್ಯ 22 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮಂಡ್ಯದಲ್ಲಿ ತನ್ನ ಅಭ್ಯರ್ಥಿಯನ್ನು ಅಖಾಡಕ್ಕೆ ಇಳಿಸದೇ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬೆಂಬಲ ಸೂಚಿಸಿದೆ. ಇನ್ನು 5 ಕ್ಷೇತ್ರಗಳ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಕಣಕ್ಕಿಳಿಸುವುದು ಬಾಕಿ ಇದೆ.
ಮೈತ್ರಿ ವಿಚಾರಕ್ಕೆ ಬರೋದಾದ್ರೆ 8 ಕ್ಷೇತ್ರಗಳನ್ನು ಜೆಡಿಎಸ್​ಗೆ ಬಿಟ್ಟು ಕೊಟ್ಟಿರೋ ಕಾಂಗ್ರೆಸ್​ 20 ಕ್ಷೇತ್ರಗಳಲ್ಲಿ ಮಾತ್ರ ತನ್ನ ಕಲಿಗಳನ್ನು ಕಣಕ್ಕಿಳಿಸಲಿದೆ. ತನ್ನ ಪಾಲಿನ ಕ್ಷೇತ್ರಗಳಲ್ಲಿ 18 ಕ್ಷೇತ್ರಗಳ ಕ್ಯಾಂಡಿಡೇಟ್​ಗಳನ್ನು ‘ಕೈ’ ಪಡೆ ಫೈನಲ್ ಮಾಡಿದೆ. ಬೆಂಗಳೂರು ದಕ್ಷಿಣ ಮತ್ತು ಧಾರವಾಡದ ಅಭ್ಯರ್ಥಿಯನ್ನು ಇನ್ನೂ ಘೋಷಿಸಿಲ್ಲ.
ಹೀಗಾಗಿ ಮುಖ್ಯವಾಗಿ ಬೆಂಗಳೂರು ದಕ್ಷಿಣದತ್ತ ಎಲ್ಲರ ಚಿತ್ತ ನೆಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು ದಕ್ಷಿಣದಿಂದ ಕಣಕ್ಕಿಳಿಯುತ್ತಾರೆ ಎಂದು ತಿಳಿದುಬಂದಿದೆ. ಬಿಜೆಪಿ ಈ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಿದ ಬಳಿಕ ಕಾಂಗ್ರೆಸ್​ ತನ್ನ ಕಲಿಯನ್ನು ಅಖಾಡಕ್ಕೆ ಇಳಿಸುವ ಸಾಧ್ಯತೆ ಇದೆ. ಮೋದಿ ಬೆಂಗಳೂರು ದಕ್ಷಿಣದಲ್ಲಿ ಸ್ಪರ್ಧಿಸೋದು ಅಧಿಕೃತವಾಗಿ ಘೋಷಣೆ ಮಾಡಿದ ಮೇಲೆ ಕೈ ತನ್ನ ಅಭ್ಯರ್ಥಿಯನ್ನು ಪ್ರಕಟಿಸಲಿದೆ.
ಮೋದಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಪ್ರಭಾವಿ ಒಕ್ಕಲಿಗ ಮುಖಂಡರನ್ನೆ ರಣಕಣಕ್ಕಿಳಿಸೋ ಚಿಂತನೆ ಕಾಂಗ್ರೆಸ್​ನದ್ದಾಗಿದ್ದು, ಟ್ರಬಲ್ ಶೂಟರ್ ಎಂದೇ ಖ್ಯಾತಿ ಪಡೆದಿರುವ ಸಚಿವ ಡಿ.ಕೆ ಶಿವಕುಮಾರ್ ಅವರು ಸ್ಪರ್ಧಿಸೋ ಸಾಧ್ಯತೆ ಇದೆ. ‘ಕೈ’ ಹೈಕಮಾಂಡ್​ ಕೂಡ ಡಿಕೆಶಿಗೆ ರೆಡಿಯಾಗಿರುವಂತೆ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆ. ಈ ಎಲ್ಲಾ ಕುತೂಹಲಗಳಿಗೆ ಶೀಘ್ರದಲ್ಲೇ ತೆರೆ ಬೀಳಲಿದೆ.

ರಾಜ್ಯ ಕಾಂಗ್ರೆಸ್​ನ ಅಭ್ಯರ್ಥಿಗಳ ಪಟ್ಟಿ
ಚಿಕ್ಕಬಳ್ಳಾಪುರ – ವೀರಪ್ಪ ಮೊಯ್ಲಿ
ಕೋಲಾರ – ಕೆ.ಎಚ್​. ಮುನಿಯಪ್ಪ
ರಾಯಚೂರು – ಬಿ.ವಿ. ನಾಯ್ಕ್​​
ಬೆಂಗಳೂರು ಕೇಂದ್ರ – ರಿಜ್ವಾನ್ ಅರ್ಷದ್
ಬಾಗಲಕೋಟೆ – ವೀಣಾ ಕಾಶಪ್ಪನವರ್​
ಬೀದರ್ – ಈಶ್ವರ್ ಖಂಡ್ರೆ
ಕಲಬುರಗಿ – ಮಲ್ಲಿಕಾರ್ಜುನ್ ಖರ್ಗೆ
ಬೆಂಗಳೂರು ಗ್ರಾಮಾಂತರ – ಡಿ.ಕೆ. ಸುರೇಶ್
ಚಾಮರಾಜ ನಗರ – ಧ್ರುವ ನಾರಾಯಣ್​​
ಬಳ್ಳಾರಿ – ವಿ.ಎಸ್​. ಉಗ್ರಪ್ಪ
ಚಿಕ್ಕೋಡಿ – ಪ್ರಕಾಶ್ ಹುಕ್ಕೇರಿ
ಮೈಸೂರು – ಕೊಡಗು – ವಿಜಯ್ ಶಂಕರ್​
ಚಿತ್ರದುರ್ಗ – ಬಿ.ಎನ್​​. ಚಂದ್ರಪ್ಪ
ಬೆಳಗಾವಿ – ವಿರುಪಾಕ್ಷಿ ಎಸ್​. ಸಾಧುನ್ನವರ್​​​
ದಾವಣಗೆರೆ – ಶಾಮನೂರು ಶಿವಶಂಕರಪ್ಪ
ದಕ್ಷಿಣ ಕನ್ನಡ – ಮಿಥುನ್​​​ ರೈ​​
ಕೊಪ್ಪಳ – ರಾಜಶೇಖರ್​ ಹಿಟ್ನಾಳ್​​
ಹಾವೇರಿ- ಡಿ.ಆರ್​​. ಪಾಟೀಲ್​​​​​​

ಪಟ್ಟಿ ಬಿಡುಗಡೆಗೆ ಬಾಕಿ ಇರುವ ಕ್ಷೇತ್ರಗಳು
ಬೆಂಗಳೂರು ದಕ್ಷಿಣ
ಧಾರವಾಡ
==
ರಾಜ್ಯದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ:

ಬೆಂಗಳೂರು ಉತ್ತರ – ಡಿ.ವಿ.ಸದಾನಂದ ಗೌಡ

ಬೆಂಗಳೂರು ಕೇಂದ್ರ – ಪಿ.ಸಿ. ಮೋಹನ್

ತುಮಕೂರು – ಜಿ.ಎಸ್.ಬಸವರಾಜ್

ಉಡುಪಿ-ಚಿಕ್ಕಮಗಳೂರು – ಶೋಭಾ ಕರಂದ್ಲಾಜೆ

ಚಿಕ್ಕಬಳ್ಳಾಪುರ – ಬಿ.ಎನ್. ಬಚ್ಚೇಗೌಡ

ಬೀದರ್ – ಭಗವಂತ್​ ಖೂಬಾ

ಹಾವೇರಿ – ಶಿವಕುಮಾರ್‌ ಉದಾಸಿ

ಬಾಗಲಕೋಟೆ – ಪಿ.ಸಿ.ಗದ್ದೀಗೌಡರ್

ಬೆಳಗಾವಿ – ಸುರೇಶ್ ಅಂಗಡಿ

ದಕ್ಷಿಣ ಕನ್ನಡ – ನಳಿನ್ ಕುಮಾರ್ ಕಟೀಲ್

ಮೈಸೂರು-ಕೊಡಗು –ಪ್ರತಾಪ್ ಸಿಂಹ

ಕಲಬುರಗಿ – ಡಾ. ಉಮೇಶ್ ಜಾಧವ್

ವಿಜಯಪುರ – ರಮೇಶ್ ಜಿಗಜಿಣಗಿ

ಶಿವಮೊಗ್ಗ- ಬಿ.ವೈ.ರಾಘವೇಂದ್ರ

ಧಾರವಾಡ – ಪ್ರಹ್ಲಾದ್ ಜೋಶಿ

ಬಳ್ಳಾರಿ – ದೇವೇಂದ್ರಪ್ಪ

ದಾವಣಗೆರೆ – ಜಿ.ಎಂ. ಸಿದ್ದೇಶ್ವರ್​

ಚಿತ್ರದುರ್ಗ – ನಾರಾಯಣಸ್ವಾಮಿ

ಹಾಸನ – ಎ.ಮಂಜು

ಚಾಮರಾಜನಗರ – ಶ್ರೀನಿವಾಸ್ ಪ್ರಸಾದ್

ಉತ್ತರ ಕನ್ನಡ – ಅನಂತ್​ಕುಮಾರ್ ಹೆಗಡೆ

ಕೋಲಾರ – ಮುನಿಸ್ವಾಮಿ

ಮಂಡ್ಯ – ಅಭ್ಯರ್ಥಿಯುನ್ನು ಕಣಕ್ಕಿಳಿಸದೇ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬೆಂಬಲ

ಪಟ್ಟಿ ರಿಲೀಸ್ ಆಗದ 7 ಕ್ಷೇತ್ರಗಳು
1) ಬೆಂಗಳೂರು ದಕ್ಷಿಣ
2) ಬೆಂಗಳೂರು ಗ್ರಾಮಾಂತರ
3) ರಾಯಚೂರು
4) ಚಿಕ್ಕೋಡಿ
6) ಕೊಪ್ಪಳ

RELATED ARTICLES

Related Articles

TRENDING ARTICLES