Saturday, April 20, 2024

ಶಾಸಕ ನಾರಾಯಣ ಗೌಡ ವಿರುದ್ಧ ದೂರು..!

ಬೆಂಗಳೂರು: ಶಾಸಕ ನಾರಾಯಣಗೌಡ ಆವರ ವಿರುದ್ಧ ವಕೀಲ ನಾರಾಯಣ ಸ್ವಾಮಿ ಅವರು ಚುನಾವಣ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. “ಚಿತ್ರರಂಗದವರು ರಾಜಕೀಯಕ್ಕೆ ತಲೆ ಹಾಕಬಾರದು. ಪ್ರಚಾರಕ್ಕೆ ಬಂದ್ರೆ ನಿಮ್ಮ ಆಸ್ತಿ ಬಗ್ಗೆ ತನಿಖೆ ಮಾಡಿಸಬೇಕಾಗುತ್ತೆ. ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ” ಎಂದು ಗರ್ವದ ಮಾತಾಡಿದ್ದ ನಾರಾಯಣಗೌಡ ವಿರುದ್ಧ ದೂರು ದಾಖಲಿಸಲಾಗಿದೆ. ಸುಮಲತಾ ಪರ ನಟ ಯಶ್ ಹಾಗೂ ದರ್ಶನ್​ ಪ್ರಚಾರಕ್ಕೆ ಹೋಗಿದ್ದ ಬಗ್ಗೆ ಶಾಸಕರು ಬೆದರಿಕೆ ಹಾಕಿದ್ದರು.

ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ನಟ ಯಶ್ ಹಾಗೂ ದರ್ಶನ್ ಅವರು ಬೆಂಬಲ ಸೂಚಿಸಿದ್ದಾರೆ. ಮಾರ್ಚ್ 20ರಂದು ಸುಮಲತಾ ಅವರು ನಾಮಪತ್ರ ಸಲ್ಲಿಸಿದ್ದು, ಬೃಹತ್ ಸಮಾವೇಶ್ ನಡೆಸಿದ್ದರು. ಸಮಾವೇಶದಲ್ಲಿ ನಿರ್ಮಾಪಕ ರಾಕ್​​ಲೈನ್​ ವೆಂಕಟೇಶ್, ನಟ ದೊಡ್ಡಣ್ಣ ಸೇರಿ ಚಿತ್ರರಂಗದ ಪ್ರಮುಖರು ಭಾಗವಹಿಸಿದ್ದರು.

RELATED ARTICLES

Related Articles

TRENDING ARTICLES