Saturday, July 27, 2024

ತಾತನಿಗಾಗಿ ಹಾಸನ ತ್ಯಾಗ ಮಾಡ್ತಾರಾ ಪ್ರಜ್ವಲ್​ ರೇವಣ್ಣ..?

ಹಾಸನ : ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಫೈನಲ್ ಮಾಡಿ ಕಣಕ್ಕಿಳಿಸುವ ತರಾತುರಿಯಲ್ಲಿವೆ. ಈ ನಡುವೆ ಒಂದಿಷ್ಟು ಕ್ಷೇತ್ರಗಳ ರಣಕಣದ ಅಭ್ಯರ್ಥಿಗಳ ಹೆಸರು ಪಕ್ಕಾ ಆಗಿದೆ. ಆದರೆ, ಹಾಸನ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಒಂದು ಅಚ್ಚರಿಯ ನಡೆ ಕೇಳಿಬಂದಿದೆ.
ತಮ್ಮ ಫೇವರೇಟ್​ ಕ್ಷೇತ್ರವಾದ ಹಾಸನವನ್ನು ಮೊಮ್ಮಗ ಪ್ರಜ್ವಲ್​ ರೇವಣ್ಣ ಅವರಿಗೆ ಬಿಟ್ಟು ಕೊಟ್ಟು ತುಮಕೂರು ಅಥವಾ ಬೆಂಗಳೂರು ಉತ್ತರದಿಂದ ಸ್ಪರ್ಧಿಸೋ ಯೋಚನೆಯಲ್ಲಿದ್ದ ಮಾಜಿ ಪ್ರಧಾನಿ ದೇವೇಗೌಡರು ಹಾಸನದಿಂದಲೇ ಸ್ಪರ್ಧಿಸ್ತಾರೆ ಎನ್ನಲಾಗುತ್ತಿದೆ.
ಸತತ 5 ಬಾರಿ ಹಾಸನದಿಂದ ಸಂಸತ್ತಿಗೆ ಆಯ್ಕೆಯಾಗಿದ್ದ ಹೆಚ್​. ಡಿ ದೇವೇಗೌಡರು, ಇತ್ತೀಚೆಗಷ್ಟೇ ತಮ್ಮ ಕ್ಷೇತ್ರದಲ್ಲಿ ಮೊಮ್ಮಗ ಪ್ರಜ್ವಲ್​ಗೆ ಅಧಿಕೃತವಾಗಿ ಟಿಕೆಟ್​ ಘೋಷಿಸಿದ್ದರು. ಆ ವೇಳೆ ಗೌಡರು ಭಾವುಕರೂ ಆಗಿದ್ದರು.
ಇದೀಗ ಕೊನೇಗಳಿಗೆಯಲ್ಲಿ ದೇವೇಗೌಡರು ಬೆಂಗಳೂರು ಉತ್ತರ ಅಥವಾ ತುಮಕೂರು ಯಾವ್ದೂ ಬೇಡ ಅಂತ ಪುನಃ ಹಾಸನದಿಂದಲೇ ಸ್ಪರ್ಧಿಸ್ತಾರೆ ಎಂಬ ಮಾಹಿತಿ ಸಿಕ್ಕಿದೆ. ಸಚಿವ ಹೆಚ್​.ಡಿ ರೇವಣ್ಣ ಅವರು ಕೂಡ ದೇವೇಗೌಡರು ಹಾಸನದಲ್ಲಿಯೇ ನಿಲ್ಲಲಿ ಎಂಬ ಅಭಿಪ್ರಾಯ ಪಟ್ಟಿದ್ದಾರೆ.
ಪ್ರಜ್ವಲ್​ ರೇವಣ್ಣ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಆದರೆ, ತನ್ನ ತಾತಾ ದೇವೇಗೌಡರಿಗಾಗಿ ಕ್ಷೇತ್ರ ತ್ಯಾಗ ಮಾಡ್ತಾರಾ ಎಂಬ ಪ್ರಶ್ನೆ ಮೂಡುತ್ತಿದೆ.

RELATED ARTICLES

Related Articles

TRENDING ARTICLES