ಹಾಸನ : ಲೋಕಸಭಾ ಎಲೆಕ್ಷನ್ ಅನೌನ್ಸ್ ಆಗಿದ್ದೇ ತಡ ರಾಜಕೀಯ ನಾಯಕರು ಪ್ರಚಾರದಲ್ಲಿ ಫುಲ್ ಬ್ಯುಸಿ ಇದ್ದಾರೆ. ಹಾಸನದಲ್ಲಿಂದು ಕಣ್ಣೀರು ರಾಜಕೀಯ ನಡೆದಿದೆ..!
ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಪ್ರಚಾರ ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಸಚಿವ ಹೆಚ್.ಡಿ ರೇವಣ್ಣ ಸೇರಿದಂತೆ ಜೆಡಿಎಸ್ ಶಾಸಕರು, ಕೆಲ ಮುಖಂಡರು ಕಣ್ಣೀರು ಹಾಕಿದ್ದಾರೆ..!
ಹೆಚ್.ಡಿ ದೇವೇಗೌಡರು ನಾನು ಕುಟುಂಬ ರಾಜಕಾರಣ ಮಾಡಿಲ್ಲ. ಎಲ್ಲರಲ್ಲೂ ಬೆಳೆಸುವ ಪ್ರಯತ್ನ ಮಾಡಿದ್ದೇನೆ ಎಂದು ಕಣ್ಣೀರಿಟ್ಟರು. ಭಾಷಣದ ವೇಳೆ ಶ್ರವಣಬೆಳೆಗೊಳದ ಶಾಸಕ ಸಿ.ಎನ್ ಬಾಲಕೃಷ್ಣ ಕಣ್ಣೀರು ಹಾಕಿದ್ರು. ಇದನ್ನು ನೋಡಿ ಸಚಿವ ಹೆಚ್,ಡಿ ರೇವಣ್ಣ ಕೂಡ ಭಾವುಕರಾದರು.
ದೇವೇಗೌಡರು ಪ್ರಜ್ವಲ್ ರೇವಣ್ಣ ಅವರೇ ಹಾಸನದ ಕ್ಯಾಂಡಿಡೇಟ್ ಅಂತ ಅನೌನ್ಸ್ ಮಾಡಿದಾಗ ಸ್ವತಃ ಪ್ರಜ್ಚಲ್ ರೇವಣ್ಣ ಅವರ ಕಣ್ಣಾಲಿಗಳು ಆನಂದಭಾಷ್ಪದಿಂದ ತೇವಗೊಂಡಿತು.