Wednesday, April 17, 2024

ಮಸೂದ್​ನನ್ನು ಬಂಧಿಸಿದ್ದು ಕಾಂಗ್ರೆಸ್​, ಬಿಟ್ಟಿದ್ದು ಬಿಜೆಪಿ : ರಾಹುಲ್ ಗಾಂಧಿ

ಗಾಂಧಿನಗರ : ಗುಜರಾತಿನ ಗಾಂಧಿನಗರದಲ್ಲಿ ನಡೆದ ಕಾಂಗ್ರೆಸ್​ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಉಗ್ರ ಮಸೂದ್​ ಅಜರ್​ನನ್ನು ಬಿಟ್ಟಿದ್ದು ಯಾರು..? ಕಾಂಗ್ರೆಸ್​ ಆತನನ್ನು ಬಂಧಿಸಿತ್ತು. ಆದ್ರೆ ಅದೇ ಉಗ್ರನನ್ನು ಬಿಟ್ಟಿದ್ದು ಬಿಜೆಪಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಇನ್ನು ಉತ್ತರ ಪ್ರದೇಶದ ಪೂರ್ವ ವಿಭಾಗದ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರ ಅವರು ಕೂಡ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಕ್​ಪ್ರಹಾರ ನಡೆಸಿದ್ದಾರೆ. ಮೋದಿ ಸರ್ಕಾರದಿಂದ ದೇಶದಲ್ಲಿ ನಿರೋದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ. 2 ಕೋಟಿ ಉದ್ಯೋಗ ಸೃಷ್ಟಿಸುವ ನರೇಂದ್ರ ಮೋದಿ ಅವರ ಭರವಸೆ ಏನಾಯ್ತು ಎಂದು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಕ್​ಪ್ರಹಾರ ನಡೆಸಿದ ಪ್ರಿಯಾಂಕಾ ವಾದ್ರಾ, ನಿಮ್ಮ ಮತವೇ ಆಯುಧ, ಪ್ರತಿಯೊಂದು ಮತವು ಅಸ್ತ್ರವಿದ್ದಂತೆ ಎಂದು ಪ್ರಿಯಾಂಕಾ ಹೇಳಿದರು,

RELATED ARTICLES

Related Articles

TRENDING ARTICLES