Thursday, March 28, 2024

ಕಂಪ್ಲಿ ಗಣೇಶ್ -ಆನಂದ್​ ಸಿಂಗ್ ಕೇಸ್​ಗೆ ಬಿಗ್ ಟ್ವಿಸ್ಟ್..!

ಬೆಂಗಳೂರು : ವಿಜಯನಗರ ಶಾಸಕ ಆನಂದ್​ ಸಿಂಗ್ ಮತ್ತು ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಅವರ ಹೊಡೆದಾಟದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಕಂಪ್ಲಿ ಗಣೇಶ್ ಮತ್ತು ಆನಂದ್ ಸಿಂಗ್ ಅವರ ಮನವೊಲಿಕೆಗೆ ಕಾಂಗ್ರೆಸ್ ನಾಯಕರು ಪ್ರಯತ್ನಿಸುತ್ತಿದ್ದಾರೆ. ಹೇಗಾದ್ರು ಮಾಡಿ ಕೇಸ್ ಹಿಂಪಡೆಯುವಂತೆ ಆನಂದ್​ ಸಿಂಗ್ ಅವರ ಮನವೊಲಿಸಿ ಅಂತ ಗಣೇಶ್ ಕಾಂಗ್ರೆಸ್​ ನಾಯಕರಲ್ಲಿನ ಮನವಿ ಮಾಡಿದ್ದಾರೆನ್ನಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಾಸಕ ರಮೇಶ್ ಜಾರಕಿಹೊಳಿ ಆನಂದ್​ ಸಿಂಗ್ ಅವರ ಮನವೊಲಿಸಿ ಕೇಸ್​ ವಾಪಸ್ಸು ಪಡೆಯುವಂತೆ ಮಾಡಲು ಹರಸಾಹಸ ಪಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ರಮೇಶ್ ಜಾರಕಿಹೊಳಿ ಅವರು ಈ ಬಗ್ಗೆ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ ಎನ್ನಲಾಗಿದೆ. ರಾಜಕಾರಣಿಗಳಿಂದ ಮನವೊಲಿಕೆ ಕಷ್ಟ ಅಂತ ಮಾಜಿ ಸಿಎಂ ಸ್ವಾಮೀಜಿ ಮೂಲಕ ಆನಂದ್​ ಸಿಂಗ್ ಮನವೊಲಿಕೆಗೆ ಯತ್ನಿಸಬಹುದು ಅಂತ ಸಲಹೆ ನೀಡಿದ್ದಾರೆಂದು ತಿಳಿದುಬಂದಿದೆ. ಆನಂದ್​ ಸಿಂಗ್ ಅವರು ಪ್ರಸನ್ನಾನಂದ ಶ್ರೀಗಳ ಮೇಲೆ ವಿಶೇಷ ಗೌರವ ಇಟ್ಟುಕೊಂಡಿದ್ದು, ಅವರ ಮೂಲಕ ಆನಂದ್​ ಸಿಂಗ್ ಅವರ ಮನವೊಲಿಸಬಹುದು ಅನ್ನೋದು ಸಿದ್ದರಾಮಯ್ಯ ಅವರ ಪ್ಲಾನ್.
ಹೀಗಾಗಿ ಕಾಂಗ್ರೆಸ್ ನಾಯಕರು ಪ್ರಸನ್ನಾ ನಂದ ಶ್ರೀಗಳ ಮೂಲಕ ಆನಂದ್​ ಸಿಂಗ್ ಅವರ ಮನವೊಲಿಸುವ ಯತ್ನ ಮಾಡಿದ್ದು, ಶ್ರೀಗಳು ಕೂಡ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.

RELATED ARTICLES

Related Articles

TRENDING ARTICLES