Friday, April 19, 2024

ಜೆಡಿಎಸ್​ ಕಾರ್ಯರ್ತರಿಂದ ಶಾಸಕ ಪ್ರೀತಂಗೌಡ ಮನೆಗೆ ಮುತ್ತಿಗೆ – ಶಾಸಕರ ಬೆಂಬಲಿಗನಿಗೆ ಕಲ್ಲೇಟು

ಹಾಸನ :  ಶಾಸಕ ಪ್ರೀತಂಗೌಡ ಮನೆ ಮೇಲೆ ಜೆಡಿಎಸ್​ ಕಾರ್ಯಕರ್ತರು ಕಲ್ಲುತೂರಾಟ ನಡೆಸಿದ್ದು, ಶಾಸಕರ ಬೆಂಬಲಿಗೊಬ್ಬರು ಗಾಯಗೊಂಡಿದ್ದಾರೆ.

ಆಪರೇಷನ್ ಕಮಲದ ವಿಚಾರವಾಗಿ ನಡೆದ ಮಾತುಕತೆವೇಳೆ ಪ್ರೀತಂಗೌಡ,  ದೇವೇಗೌಡರ  ವಿರುದ್ಧ ಹಗರುವಾದ ಮಾತುಗಳನ್ನಾಡಿದ್ದು, ಗೌಡರ ವಿಕೆಟ್​ ಬೀಳುತ್ತೆ ಎಂದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಜೆಡಿಎಸ್​ ಕಾರ್ಯರ್ತರು ಪ್ರೀತಂಗೌಡ ಅವರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನಾಕಾರರು ಕಲ್ಲುತೂರಾಟ ನಡೆಸಿದ್ದು, ಘಟನೆಯಲ್ಲಿ ಶಾಸಕ ಪ್ರೀತಂಗೌಡ ಅವರ ಬೆಂಬಲಿಗನ ಕಣ್ಣಿನ ಬಳಿ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

RELATED ARTICLES

Related Articles

TRENDING ARTICLES