Friday, March 29, 2024

ಚುನಾವಣಾ ಬಜೆಟ್​ನ Live ಅಪ್​ಡೇಟ್ಸ್​​

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಪ್ರಸಕ್ತ ಅವಧಿಯ ಕೊನೆಯ ಬಜೆಟ್​​ ಮಂಡನೆ ಆಗುತ್ತಿದೆ. ಹಂಗಾಮಿ ವಿತ್ತ ಸಚಿವ (ಹಣಕಾಸು ಸಚಿವ) ಪಿಯೂಷ್​ ಗೋಯಲ್ ಬಜೆಟ್​ ಮಂಡಿಸುತ್ತಿದ್ದಾರೆ. ಈಗಾಗಲೇ ಗೋಯಲ್​ ಬಜೆಟ್​ ಸೂಟ್​ಕೇಸ್ ತಗೊಂಡು ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರಿಗೆ ಬಜೆಟ್​ ವಿವರಣೆ ನೀಡಿ, ಅವರ ಅಂಕಿತ ಪಡೆದಿದ್ದಾರೆ. ಲೋಕಸಭಾ ಚುನಾವಣಾ ಸನಿಹದಲ್ಲಿ ಮಂಡನೆ ಆಗುತ್ತಿರುವ ಈ ಬಜೆಟ್​ ‘ಚುನಾವಣಾ ಬಜೆಟ್​’ ಎಂದೇ ಕರೆಯಲ್ಪಡುತ್ತಿದ್ದು. ಲೆಕ್ಕಾಚಾರ-2019 ರ Live ಅಪ್​​ಡೇಟ್ಸ್​ ಇಲ್ಲಿದೆ.

ಲೆಕ್ಕಾಚಾರ 2019:

  • 2030ರ ಹೊತ್ತಿಗೆ ನೆಕ್ಸ್ಟ್​ ಜನರೇಶನ್​ನ ಅತ್ಯಾಧುನಿಕ ಮೂಲಭೂತ ಸೌಲಭ್ಯವನ್ನು ಒದಗಿಸಲಾಗುತ್ತದೆ ಎಂದು ಹಂಗಾಮಿ ಹಣಕಾಸು ಸಚಿವ ಪಿಯೂಶ್ ಗೋಯಲ್​ ಹೇಳಿದ್ದಾರೆ.
  • ಭಾರತ ಎಲೆಕ್ಟ್ರಿಕ್​​ ವಾಹನಗಳನ್ನು ಉಪಯೋಗಿಸುವುದರಲ್ಲಿ ಜಗತ್ತಿನ ದೇಶಗಳ ನಾಯಕತ್ವ ವಹಿಸಲಿದೆ.
  • 2030ರ ವೇಳೆಗೆ ಡಿಜಿಟಲ್​ ಇಂಡಿಯಾ ಭಾರತದ ಪ್ರತಿ ಪ್ರಜೆಯನ್ನು ತಲುಪಲಿದೆ.
  • ಆಧುನಿಕ ತಂತ್ರಜ್ಞಾನದ ಮೂಲಕ ಗ್ರಾಮೀಣ ಭಾರತದ ಕೈಗಾರಿಕೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ.
  • ಶುದ್ಧ ಕುಡಿಯುವ ನೀರನ್ನು ಒದಗಿಸುವುದರೊಂದಿಗೆ, ನದಿಗಳನ್ನು ಸ್ವಚ್ಛ ಮಾಡುವುದು.
  • 2022ರೊಳಗಾಗಿ ಭಾರತದ ಆಸ್ಟ್ರೋನಟ್​ನ್ನು ಸ್ಪೇಸ್​ಗೆ ತಲುಪಿಸುವುದು.
  • ವಾರ್ಷಿಕ 5 ಲಕ್ಷದ ತನಕ ಆದಾಯ ಪಡೆಯುವ ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಸಂಪೂರ್ಣ ತೆರಿಗೆ ವಿನಾಯಿತಿ
  • 6.5 ಲಕ್ಷ ವಾರ್ಷಿಕ ಆದಾಯವಿರುವ ಕುಟುಂಬ ಬಂಡವಾಳ ಹೂಡಿಕೆ ಮಾಡಿದಲ್ಲಿ ತೆರಿಗೆ​ ವಿನಾಯಿತಿ
  • ಬ್ಯಾಂಕ್​ ಹಾಗೂ ಪೋಸ್ಟ್​ ಆಫೀಸ್​ನಲ್ಲಿ 10,000ದಿಂದ 40,000 ಡೆಪಾಸಿಟ್​ ಬಡ್ಡಿಗೆ ಟಿಡಿಎಸ್​ ಮಿತಿ ನಿಗದಿ.
  • 1.8 ಲಕ್ಷದಿಂದ 2.4 ಬಾಡಿಗೆ ಆದಾಯದ ಮೇಲೆ ಟಿಡಿಎಸ್​ ಕಡಿತ
  • 2 ಲಕ್ಷದವರೆಗಿನ ಗೃಹ ಸಾಲಕ್ಕೆ ತೆರಿಗೆ ವಿನಾಯತಿ ನೀಡಲಾಗುತ್ತದೆ.
  • ಸ್ಟಾಂಡರ್ಡ್ ಟ್ಯಾಕ್ಸ್ ಡಿಡಕ್ಷನ್ 40,000 ಕ್ಕೆ ಏರಿಕೆ 50,000
  • ಕಿಸಾನ್​ ಸಮ್ಮಾನ್​ ಯೋಜನೆ ಮೂಲಕ 2 ಹೆಕ್ಟೇರ್​ ಗಿಂತ ಕಮ್ಮಿ ಜಮೀನು ಹೊಂದಿರೋ ರೈತರ ಖಾತೆಗೆ ನೇರವಾಗಿ 6 ಸಾವಿರ ರೂ ಮಂಜೂರು ಮಾಡ್ತಿದ್ದೇವೆ. ಈ ಹಣ 3 ಕಂತುಗಳಲ್ಲಿ ರೈತರ ಖಾತೆಗೆ ಜಮಾ ಮಾಡ್ತೀವಿ. ಈ ಯೋಜನೆ 12 ಕೋಟಿ ರೈತ ಕುಟುಂಬಗಳಿಗೆ  ವರದಾನ – ಪಿಯೂಷ್​ ಗೋಯಲ್​

ಪಿಯೂಷ್​ ಗೋಯಲ್​ ಹೇಳಿದ ಸರ್ಕಾರದ ಸಾಧನೆಗಳು:

  • ಜಿಎಸ್​ಟಿಯನ್ನು ಕಡಿಮೆ ಮಾಡಲಾಗಿದೆ. ಬಡ ಮತ್ತು ಮಧ್ಯಮ ವರ್ಗದ ಅಗತ್ಯ ವಸ್ತುಗಳ ತೆರಿಗೆ ಕೇವಲ0-5ರಷ್ಟು ಮಾತ್ರ ಇದೆ- ಪಿಯೂಷ್​ ಗೋಯಲ್​
  • ತೆರಿಗೆ ಸಂಗ್ರಹ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಸಾಮಾನ್ಯ ಮತ್ತು ಮಧ್ಯಮ ವರ್ಗದವರಿಗೆ ತೆರಿಗೆ ದರವನ್ನು ಕಡಿಮೆ ಮಾಡಿದ್ದೇವೆ. ಕಳೆದ ವರ್ಷ ಶೇ. 99.54ರಷ್ಟು ಐಟಿ ರಿಟರ್ನ್ಸ್​​ ತಕ್ಷಣ ಸ್ವೀಕರಿಸಲಾಗಿದೆ. ಆದಾಯ ತೆರಿಗೆಯಲ್ಲಿ ಯಾವ್ದೇ ಬದಲ ಇಲ್ಲದೇ ಇದ್ದರೂ ಟ್ಯಾಕ್ಸ್​ ಕಲೆಕ್ಷನ್​ ಭಾರೀ ಹೆಚ್ಚಳವಾಗಿದೆ – ಪಿಯೂಷ್ ಗೋಯಲ್
  • ಕಳೆದ 5 ವರ್ಷಗಳಲ್ಲಿ ಸ್ಥಳೀಯ ವಿಮಾನ ಸಂಚಾರದಲ್ಲಿ ಹೆಚ್ಚಳವಾಗಿರೋದನ್ನು ಗಮನಿಸಬೇಕು. ದೇಶದಲ್ಲಿ ಸದ್ಯ 100 ಕಾರ್ಯನಿರತ ಏರ್​ಪೋರ್ಟ್​ಗಳಿವೆ -ಪಿಯೂಷ್​ ಗೋಯಲ್​
  • ರಕ್ಷಣಾ ಬಜೆಟ್​ ಅನ್ನು 3 ಲಕ್ಷ ಕೋಟಿಗಿಂತಾ ಹೆಚ್ಚಿಸಲಾಗಿದೆ –ಪಿಯೂಷ್​ ಗೋಯಲ್​
  • ಒನ್​ ರ್ಯಾಂಕ್​ ಒನ್​ ಪೆಕ್ಷನ್​ ಯೋಜನೆ ಕಳೆದ 40 ವರ್ಷಗಳಿಂದ ನೆನೆಗುದಿಯಲ್ಲಿತ್ತು. ನಮ್ಮ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದ್ದು, 35 ಸಾವಿರ ಕೋಟಿ ಪಿಂಚಣಿಯನ್ನು ಈಗಾಗಲೇ ವಿತರಿಸಲಾಗಿದೆ.
  • ಮುದ್ರಾ ಯೋಜನೆಯ ಫಲಾನುಭವಿಗಳಲ್ಲಿ ಶೇ.75ರಷ್ಟು ಮಹಿಳೆಯರೇ ಇದ್ದಾರೆ. ಮಾತೃತ್ವ ಯೋಜನೆಯಡಿ 26ರವಾರಗಳ ಹೆರಿಗೆ ರಜೆ ನೀಡಲಾಗಿದ್ದು, ಮಹಿಳಾ ಸಬಲೀಕರಣ ಸಾಧ್ಯವಾಗುತ್ತಿದ್ದು ಸರ್ಕಾರದ ಹೆಮ್ಮೆ – ಪಿಯೂಷ್​ ಗೋಯಲ್
  • ಉದ್ಯೋಗಿಗಳು, ಉದ್ಯೋಗ ಹುಡುಕುತ್ತಿದ್ದವರು ಉದ್ಯೋಗ ನೀಡುವಂತಾಗಿದ್ದಾರೆ. ಭಾರತ ವಿಶ್ವದ ಎರಡನೇ ಅತೀ ದೊಡ್ಡ ಸ್ಟಾರ್ಟ್​ಅಪ್​ ಹಬ್ ಆಗಿ ಮಾರ್ಪಟ್ಟಿದೆ – ಪಿಯೂಷ್​ ಗೋಯಲ್​
  • ಈಶಾನ್ಯ ರಾಜ್ಯದ ಜನರಿಗೆ ಅನುದಾನಗಳನ್ನು ಹೆಚ್ಚಿಸಲಾಗಿದೆ. 58,166 ಕೋಟಿ ರೂಪಾಯಿ ಅನುದಾನವನ್ನು ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ವಿನಿಯೋಗಿಸಲಾಗಿದೆ- ಪಿಯೂಷ್ ಗೋಯಲ್​
  • ಮೊಬೈಲ್​ ಡಾಟಾ ಬಳಕೆ 50 ಪಟ್ಟು ಹೆಚ್ಚಳವಾಗಿದೆ. ಮುಂದಿನ ವರ್ಷಕ್ಕಾಗುವಾಗ 1ಲಕ್ಷ ಗ್ರಾಮಗಳನ್ನು ಡಿಜಿಟಲ್​ ವಿಲೇಜ್​ ಮಾಡಲು ಗುರಿಹೊಂದಲಾಗಿದೆ. ಭಾರತದಲ್ಲಿ ವಾಯ್ಸ್​ಕಾಲ್​ ಹಾಗೂ ಡಾಟಾ ಉಳಿದ ದೇಶಗಳಿಗೆ ಹೋಲಿಸಿದಲ್ಲಿ ಕಡಿಮೆ ವೆಚ್ಚದಲ್ಲಿ ಜನರಿಗೆ ಲಭ್ಯವಾಗುತ್ತಿದೆ – ಪಿಯೂಷ್ ಗೋಯಲ್​
  • ಕಳೆದ 5 ವರ್ಷದಲ್ಲಿ 34 ಕೋಟಿ ಜನಧನ ಖಾತೆಗಳನ್ನು ತೆರೆಯಲಾಗಿದೆ. ಮಧ್ಯಮ ಮತ್ತು ಬಡ ಜನರಿಗೆ ಕೇಂದ್ರದ ಯೋಜನೆ ಫಲಾನುಭವ ನೇರವಾಗಿ ಪಡೆಯಲು ಸಾಧ್ಯವಾಗಿದೆ – ಪಿಯೂಷ್ ಗೋಯಲ್​
  • ತೆರಿಗೆ ಸಂಗ್ರಹ​ದಲ್ಲಿ 3.79 ರಿಂದ 6.85 ಹೆಚ್ಚಳವಾಗಿದೆ. ಆದಾಯ ತೆರಿಗೆ ಫೈಲ್​ ಮಾಡುವ ಸಂಬಂಧ ಆನ್​ಲೈನ್​ನಲ್ಲೂ ಕೆಲಸ ಮಾಡಲಾಗುತ್ತಿದೆ. 638 ಲಕ್ಷ ಕೋಟಿಯಿಂದ 12ಲಕ್ಷ ಕೋಟಿ ರೂಪಾಯಿಗೆ ತೆರಿಗೆ ಸಂಗ್ರಹ ಹೆಚ್ಚಳವಾಗಿದೆ – ಪಿಯೂಷ್ ಗೋಯಲ್​
  • ಉಜ್ವಾಲ್​ ಯೋಜನೆಡಯಡಿ 6 ಕೋಟಿಯಷ್ಟು ಎಲ್​ಪಿಜಿ ಸಂಪರ್ಕವನ್ನು ಕೊಟ್ಟಿದ್ದೇವೆ – ಪಿಯೂಷ್​ ಗೋಯಲ್​
  • ಪ್ರಧಾನಮಂತ್ರಿ ಶ್ರಮಯೋಗಿ ಯೋಜನೆಯ ಅಡಿಯಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಂದ ಪ್ರತಿ ತಿಂಗಳು 100 ರೂ ಪಡೆದು ಅವರಿಗೆ 60 ವರ್ಷಗಳಾದ್ಮೇಲೆ ಮಾಸಿಕ 3000 ಪಿಂಚಣಿ ನೀಡಲಿದ್ದೇವೆ. ಯೋಜನೆಗೆ 500 ಕೋಟಿ ರೂ ಮೀಸಲು ಇಟ್ಟಿದ್ದೀವಿ- ಪಿಯೂಷ್ ಗೋಯಲ್​
  • ಶೀಘ್ರದಲ್ಲೇ 7ನೇ ವೇತನ ಆಯೋಗ ಶಿಫಾರಸು ಜಾರಿ ಮಾಡಲಿದ್ದೇವೆ – ಪಿಯೂಷ್​ ಗೋಯಲ್​
  • ತೆರಿಗೆ ರಹಿತ ಗ್ರಾಚ್ಯುಟಿಯನ್ನು 10 ಲಕ್ಷ ದಿಂದ 20 ಲಕ್ಷಕ್ಕೆ ಹೆಚ್ಚಳ – ಪಿಯೂಷ್​ ಗೋಯಲ್
  • ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ಯೋಜನೆ ಜಾರಿಗೆ ತಂದಿದ್ದೇವೆ. ಸೇವಾಧಿಯಲ್ಲಿ ಸಾವನ್ನಪ್ಪಿದ ಕಾರ್ಮಿಕರ ಕುಟುಂಬಗಳಿಗೆ 6 ಲಕ್ಷ ಪರಿಹಾರ – ಪಿಯೂಷ್​ ಗೋಯಲ್​
  • ಇಎಸ್​ಐ ಮಿತಿಯನ್ನು 21ಸಾವಿರ ರೂಗಳಿಗೆ ಹೆಚ್ಚಿಸಲಾಗಿದೆ – ಪಿಯೂಷ್​ ಗೋಯಲ್​
  • ಪ್ರಕೃತಿ ವಿಕೋಪದಿಂದ ನಷ್ಟ ಅನುಭವಿಸಿದ ರೈತರಿಗೆ ಸಾಲದ ಬಡ್ಡಿಯನ್ನು ಶೇ.2ರಷ್ಟು ಇಳಿಸಿದ್ದೇವೆ. ಸಮಯಕ್ಕೆ ಸರಿಯಾಗಿ ಸಾಲ ಪಾವತಿಸದ ರೈತರಿಗೆ ಶೇ3ರಷ್ಟು ಬಡ್ಡಿ ಇಳಿಕೆ – ಪಿಯೂಷ್​ ಗೋಯಲ್​
  • ರಾಷ್ಟ್ರೀಯ ಗೋಕುಲ್​ ಮಿಷನ್​ಗೆ ಅನುದಾನ ಹೆಚ್ಚಿಸಿದ್ದೇವೆ. ಪ್ರಸಕ್ತ ಸಾಲಿನಲ್ಲಿ 75 ಕೋಟಿ ರೂ ಅನುದಾನ ನೀಡಲಾಗುವುದು – ಪಿಯೂಷ್​ ಗೋಯಲ್​
    ಮೀನುಗಾರಿಕೆಗೆ ಪ್ರತ್ಯೇಕ ಇಲಾಖೆ ರಚಿಸಲು ತೀರ್ಮಾನಿಸಿದ್ದೇವೆ. ಕಾಮಧೇನು ಆಯೋಗ ಸ್ಥಾಪನೆ ಮಾಡಲಾಗುತ್ತೆ- ಪಿಯೂಷ್​ ಗೋಯಲ್​
  • 22 ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ್ದೇವೆ- ರೈತರ ಆದಾಯ ದ್ವಿಗುಣವಾಗಿದೆ – ಪಿಯೂಷ್​ ಗೋಯಲ್​
  • ಪ್ರಧಾನ ಮಂತ್ರಿ ಆವಾಸ್​ ಯೋಜನೆಯಡಿಯಲ್ಲಿ 2014-18ರ ಅವಧಿಯಲ್ಲಿ 1.53 ಕೋಟಿ ಮನೆಗಳನ್ನು ಕಟ್ಟಿಸಿ ಕೊಟ್ಟಿದ್ದೇವೆ – ಪಿಯೂಷ್​ ಗೋಯಲ್​
  • ಹರಿಯಾಣ 22 ನೇ ಏಮ್ಸ್ ಆಸ್ಪತ್ರೆ ನಿರ್ಮಾಣ ಮಾಡಿದ್ದೇವೆ – ಪಿಯೂಶ್ ಗೋಯಲ್
  • ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಆಯುಷ್ಮಾನ್​ ಭಾರತ್ ಅನ್ನೋ ಆರೋಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆ ವಿಶ್ವದ ಅತೀ ದೊಡ್ಡ ಆರೋಗ್ಯ ಯೋಜನೆ. ಔಷಧಗಳ ಬೆಲೆ ಕಮ್ಮಿ ಆಗಿರೋದ್ರಿಂದ ಜನತೆಗೆ ಅನುಕೂಲವಾಗಿದೆ. ಆಯುಷ್ಮಾನ್​ ಭಾರತ್​ ನ ಲಾಭವನ್ನು ಸುಮಾರು 50ಕೋಟಿ ಮಂದಿ ಲಾಭ ಪಡೀತಾ ಇದ್ದಾರೆ – ಪಿಯೂಷ್​ ಗೋಯಲ್​
  • ಸೌಭಾಗ್ಯ ಯೋಜನೆ ಮೂಲಕ ಬಹುತೇಕ ಎಲ್ಲರ ಮನೆಗಳಿಗೆ ಬೆಳಕು ನೀಡಿದ್ದೇವೆ (ವಿದ್ಯುತ್​) – ಪಿಯೂಷ್​ ಗೋಯಲ್​
  • ಆಹಾರ ಪೂರೈಕೆಗಾಗಿ 1.7 ಲಕ್ಷ ಮೀಸಲಿಟ್ಟಿದ್ದೇವೆ – ಪಿಯೂಷ್ ಗೋಯಲ್​
  • ನಮ್ಮ ಸರ್ಕಾರ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಒತ್ತು ನೀಡಿದೆ. ಈ ಅವಧಿಯಲ್ಲಿ ಗ್ರಾಮೀಣ ರಸ್ತೆಗಳ ನಿರ್ಮಣ ಮೂರು ಪಟ್ಟು ಹೆಚ್ಚಾಗಿದೆ. ಆರ್ಥಿಕವಾಗಿ ಹಿಂದುಳಿದವರಿಗೋಸ್ಕರ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುವ ಮಹತ್ವದ ಪ್ರಯತ್ನವನ್ನು ಮಾಡಿದ್ದೀವಿ- ಪಿಯೂಷ್​ ಗೋಯಲ್
  • ನಮ್ಮ ಸರ್ಕಾರ ವಂಚಕರನ್ನು ಸುಮ್ನೆ ಬಿಟ್ಟಿಲ್ಲ. 3 ಲಕ್ಷ ಕೋಟಿ ರೂಗಳನ್ನು ವಸೂಲಿ ಮಾಡಲಾಗಿದ್ದು, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸುಧಾರಣೆ ತಂದಿದ್ದೇವೆ. ಭ್ರಷ್ಟಾಚಾರ ಮುಕ್ತ ಆಡಳಿತವನ್ನು ನೀಡಿದ್ದೇವೆ- ಪಿಯೂಷ್​ ಗೋಯಲ್​
  • 2018ರ ಡಿಸೆಂಬರ್ ವೇಳೆಗೆ ಶೇ.2.1ರಷ್ಟು ಹಣದುಬ್ಬರ ಇತ್ತು. 2018-19ನೇ ಸಾಲಿನಲ್ಲಿ ಹಣಕಾಸಿನ ಕೊರತೆಯನ್ನು 3.4ಕ್ಕೆ ಇಳಿಕೆ ಮಾಡಲಾಗಿದೆ – ಪಿಯೂಷ್​ ಗೋಯಲ್​

ಬೆಳಗ್ಗೆ 11 ಗಂಟೆ : ಹಂಗಾಮಿ ಹಣಕಾಸು ಸಚಿವ ಪಿಯೂಷ್ ಗೋಯಲ್ ಬಜೆಟ್​ ಮಂಡನೆ ಆರಂಭ.

 

RELATED ARTICLES

Related Articles

TRENDING ARTICLES