Friday, April 26, 2024

ಸಿಎಂ ಕುಮಾರಸ್ವಾಮಿ ಪರ ಡಿಸಿಎಂ ಪರಮೇಶ್ವರ್ ಬ್ಯಾಟಿಂಗ್!

ಬೆಂಗಳೂರು : ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರ ಪರ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್​ ಬ್ಯಾಟಿಂಗ್ ನಡೆಸಿದ್ದಾರೆ.
ಕಾಂಗ್ರೆಸ್​ ನಾಯಕರ ಹೇಳಿಕೆಗಳಿಂದ ಬೇಸತ್ತು ರಾಜೀನಾಮೆ ನೀಡಲು ಸಿದ್ಧ ಎಂದು ಕುಮಾರಸ್ವಾಮಿ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಪರಮೇಶ್ವರ್​, ”ಕುಮಾರಸ್ವಾಮಿಯವರೇ ನಮ್ಮ ಮುಖ್ಯಮಂತ್ರಿ. ಸಿದ್ದರಾಮಯ್ಯನವರು ನಮ್ಮ ಸಿಎಲ್​ಪಿ ನಾಯಕರು. ಎಸ್​.ಟಿ ಸೋಮಶೇಖರ್​ ಅವರ ಹೇಳಿಕೆ ವೈಯಕ್ತಿಕ” ಎಂದಿದ್ದಾರೆ.
ಇನ್ನು ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾಗಿರುವ ಕಾಂಗ್ರೆಸ್​ ಸಿಎಂ ರಾಜೀನಾಮೆ ಹೇಳಿಕೆ ಬೆನ್ನಲ್ಲಿ ‘ನಮ್ಮ ಸಿಎಂ ಸಿದ್ದರಾಮಯ್ಯನವರೇ ಎಂದಿರುವ’ ಎಸ್​.ಟಿ ಸೋಮಶೇಖರ್ ಕೆಪಿಸಿಸಿ ಶೋಕಾಸ್​ ನೋಟಿಸ್​ ನೀಡಲು ಮುಂದಾಗಿದೆ.

RELATED ARTICLES

Related Articles

TRENDING ARTICLES