ಕೊಪ್ಪಳ : BSPL ಮತ್ತು MSPL ಕಾರ್ಖಾನೆ ವಿರೋಧಿಸಿ ಇಂದು ಕೊಪ್ಪಳ ಬಂದ್ಗೆ ಕರೆ ನೀಡಿದ್ದು. ಪ್ರತಿಭಟನೆಯ ಬಹಿರಂಗ ಸಭೆಯಲ್ಲಿ ಗವಿಮಠದ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಜನರು ಕಾರ್ಖಾನೆಗಳಿಂದ ಅನುಭವಿಸುತ್ತಿರುವ ವಿಡಿಯೋ ನೋಡಿ ಭಾವುಕರಾಗಿದ್ದಾರೆ.
ಕಾರ್ಖಾನೆ ಹಠಾವೋ ಕೊಪ್ಪಳ ಬಚಾವೋ ಎನ್ನುವ ಜಾಗೃತಿ ಜಾಥಾದೊಂದಿಗೆ ಕೊಪ್ಪಳ ಬಂದ್ಗೆ ಕರೆ ನೀಡಲಾಗಿದ್ದು. ಬಂದ್ ಹಿನ್ನಲೆ ಕೊಪ್ಪಳ ತಾಲೂಕಿನ ಸರ್ಕಾರಿ, ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕೊಪ್ಪಳದ ಪ್ರಮುಖರ ರಸ್ತೆಗಳಲ್ಲಿ ಕಾರ್ಖಾನೆ ವಿರುದ್ಧ ಜಾಗೃತಿ ಜಾಥಾ ನಡೆದಿದ್ದು. ಆಟೋ-ಖಾಸಗಿ ವಾಹನಗಳು ಸಹ ಕೊಪ್ಪಳ ಬಂದ್ಗೆ ಬೆಂಬಲ ನೀಡಿವೆ.
ಇದನ್ನೂ ಓದಿ :ಕ್ಷಮಿಸಿ ಪಾಕ್ ಅಭಿಮಾನಿಗಳೇ, 10 ನಿಮಿಷದಲ್ಲಿ ಟಿವಿ ಡೆಲಿವರಿ ಮಾಡೋಕೇ ಆಗಲ್ಲ: ಪಾಕ್ನ ಟ್ರೋಲ್ ಮಾಡಿದ ಬ್ಲಿಂಕ್ಇಟ್
ಜಾಗೃತಿ ಜಾಥದ ನಂತರ ಕೊಪ್ಪಳದ ತಾಲೂಕಿನ ಕ್ರೀಡಾಂಗಣದಲ್ಲಿ ಬಹಿರಂಗ ಪ್ರತಿಭಟನೆ ಸಭೆ ನಡೆಯುತ್ತಿದ್ದು. ಈ ಸಭೆಯಲ್ಲಿ ಸಾವಿರಾರು ಪ್ರತಿಭಟನೆಕಾರರು ಆಗಮಿಸಿದ್ದಾರೆ. ಈ ಪ್ರತಿಭಟನೆ ಸಭೆಯಲ್ಲಿ ಭಾಗವಹಿಸಿರುವ ಗವಿಮಠದ ಅಭಿನವ ಗವಿಸಿದ್ದೇಶ್ವರ ಶ್ರೀಗಳು, ಕಾರ್ಖಾನೆಗಳಿಂದ ಗ್ರಾಮೀಣ ಭಾಗದ ಜನರು ನರಾಳಾಡುತ್ತಿರೋ ವಿಡಿಯೋ ಬಿಡುಗಡೆ ಮಾಡಿದರು. ಈ ವಿಡಿಯೋವನ್ನು ನೋಡಿದ ಶ್ರೀಗಳು ಕೆಲ ಕಾಲ ಭಾವುಕರಾಗಿ. ಕಣ್ಣೀರು ಹಾಕಿದರು. ಈ ವಿಡಿಯೋ ನೋಡಿದ ಸಾವಿರಾರು ಜನರು ಕೂಡ ಭಾವುಕರಾದರು.