Wednesday, February 12, 2025

ನಮ್ಮ ಪೊಲೀಸರು ಕಾಮನ್​ಸೆನ್ಸ್​ ಇಟ್ಟುಕೊಂಡೆ ಕೆಲಸ ಮಾಡಿದ್ದಾರೆ: ಡಿ.ಕೆ ಶಿವಕುಮಾರ್​

ಮೈಸೂರು : ಉದಯಗಿರಿ ಗಲಾಟೆ ಕುರಿತು ಡಿಸಿಎಂ ಡಿ.ಕೆ ಶಿವಕುಮಾರ್​ ಹೇಳಿಕೆ ನೀಡಿದ್ದು. ಮೈಸೂರಿನ ಗಲಾಟೆಯಲ್ಲಿ ಪೊಲೀಸರು ಸರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ನಾನು ಪೊಲೀಸರ ಪರವಾಗಿಯೇ ಇದ್ದೇನೆ ಎಂದು ಹೇಳಿದರು.

ಪೊಲೀಸರಿಗೆ ಕಾಮನ್​ ಸೆನ್ಸ್​ ಇಲ್ಲ, ಅವರು ಉದಯಗಿರಿ ದಾಂಧಲೆಯನ್ನು ಸರಿಯಾಗಿ ನಿರ್ವಹಿಸಿಲ್ಲ ಎಂಬ ರಾಜಣ್ಣ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿತ್ತು. ಇದಕ್ಕೆ ಡಿ.ಕೆ ಶಿವಕುಮಾರ್​ ಪ್ರತಿಕ್ರಿಯೆ ನೀಡಿದ್ದು. ‘ನಾನು ಡಿಸಿಎಂ ಆಗಿ ಹೇಳುತ್ತಿದ್ದೇನೆ. ಪೊಲೀಸರದ್ದು ಯಾವ ತಪ್ಪು ಇಲ್ಲ.ಪೊಲೀಸರು ಸರಿಯಾಗಿಯೇ ಕೆಲಸ ಮಾಡಿದ್ದಾರೆ. ಸರಿಯಾಗಿ ಪರಿಸ್ಥಿತಿ ನಿಭಾಯಿಸಿದ್ದಾರೆ. ಪೊಲೀಸರು ಗಾಯಗೊಂಡರು ಕೂಡ ಸಮಯ ಪ್ರಜ್ಞೆಯಿಂದ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ :ಬಿರು ಬೇಸಿಗೆಯಲ್ಲಿ ಬಸವಳಿಯಲಿದ್ದಾರೆ ರಾಜ್ಯದ ಜನತೆ: ಹವಮಾನ ಇಲಾಖೆ ಎಚ್ಚರಿಕೆ

ನಾನು ನಮ್ಮ ಪೊಲೀಸರ ಪರವಾಗಿಯೇ ಇದ್ದೇನೆ. ಯಾರು ಏನು ಹೇಳಿದರು ಎಂಬುದು ಮುಖ್ಯವಲ್ಲ‌. ಸಚಿವ ರಾಜಣ್ಣ ಅವರು ಈ ವಿಚಾರದಲ್ಲಿ ಹೇಳಿರುವ ಮಾತಿಗೆ ಸಿಎಂ ಉತ್ತರ ಕೊಡುತ್ತಾರೆ‌. ಸಿಎಂಗೆ ಸದ್ಯಕ್ಕೆ ಮಾತನಾಡಲು ಆಗುತ್ತಿಲ್ಲ. 8 ರಿಂದ 10ದಲ್ಲಿ ಅವರೇ ಮಾತನಾಡುತ್ತಾರೆ. ನಾನು ಮೈಸೂರಿನ ನೆಲದಲ್ಲಿ ನಿಂತು ಹೇಳುತ್ತಿದ್ದೇನೆ.ನಮ್ಮ ಪೊಲೀಸರದ್ದು ಯಾವ ತಪ್ಪು ಇಲ್ಲ ಎಂದು ಡಿ,ಕೆ ಶಿವಕುಮಾರ್​ ಹೇಳಿಕೆ ನೀಡಿದರು.

RELATED ARTICLES

Related Articles

TRENDING ARTICLES