Saturday, February 8, 2025

ಹಣ ಮತ್ತು ಮದ್ಯದ ಮೇಲೆ ಗಮನ ಹರಿಸಿ ಕೇಜ್ರಿವಾಲ್​ ಸೋತಿದ್ದಾನೆ: ಅಣ್ಣಾ ಹಜಾರೆ

ದೆಹಲಿ : ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಅಣ್ಣಾಹಜಾರೆ ಮಾತನಾಡಿದ್ದು , ಅರವಿಂದ್ ಕೇಜ್ರಿವಾಲ್ ಮತ್ತು ಅವರ ನಾಯಕತ್ವದ ಬಗ್ಗೆ ಕಟುವಾದ ಟೀಕೆ ಮಾಡಿದ್ದಾರೆ. 

ಕೇಜ್ರಿವಾಲ್​ ಅಧಃಪತನದ ಬಗ್ಗೆ ಮಾತನಾಡಿರುವ ಅಣ್ಣ ಹಜಾರೆ ‘ಚುನಾವಣೆಯ ಸಮಯದಲ್ಲಿ ಅಭ್ಯರ್ಥಿಯ ನಡವಳಿಕೆ, ಆಲೋಚನೆಗಳು ಮತ್ತು ಜೀವನವು ಶುದ್ಧವಾಗಿರಬೇಕು, ದೋಷರಹಿತವಾಗಿರಬೇಕು ಮತ್ತು ತ್ಯಾಗದಿಂದ ತುಂಬಿರಬೇಕು ಎಂದು ನಾನು ಯಾವಾಗಲೂ ಹೇಳಿದ್ದೇನೆ. ಈ ಗುಣಗಳು ಮತದಾರರು ಅವರ ಮೇಲೆ ನಂಬಿಕೆ ಇಡಲು ಸಹಾಯ ಮಾಡುತ್ತದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ :ವಿಡಿಯೋ ಮಾಡಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ನಟ ದರ್ಶನ್​

“ನಾನು ಇದನ್ನು ಅರವಿಂದ್ ಕೇಜ್ರಿವಾಲ್ ಅವರಿಗೆ ಹೇಳಿದೆ, ಆದರೆ ಅವರು ಗಮನ ಹರಿಸಲಿಲ್ಲ. ಅವರು ಅಂತಿಮವಾಗಿ ಅವರ ಗಮನವನ್ನು ಮದ್ಯದ ಮೇಲೆ ಕೇಂದ್ರೀಕರಿಸಿದರು. ಈ ಸಮಸ್ಯೆ ಏಕೆ ಉದ್ಭವಿಸಿತು? ಅವರು ಹಣದ ಬಲದಿಂದ ಮುಳುಗಿಹೋದರು” ಎಂದು ದೆಹಲಿ ಮದ್ಯ ನೀತಿಯ ಸುತ್ತಲಿನ ವಿವಾದಗಳನ್ನು ಉಲ್ಲೇಖಿಸುತ್ತಾ ಹಜಾರೆ ಟೀಕಿಸಿದರು.

ಯಾವ ಭ್ರಷ್ಟಚಾರ ವಿರೋಧಿ ಅಭಿಯಾನದಲ್ಲಿ ಅಣ್ಣ ಹಜಾರೆ ಜೊತೆ ಗುರುತಿಸಿಕೊಂಡು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ ಅರವಿಂದ್ ಕೇಜ್ರಿವಾಲ್​. ಇಂದು ಅವರಿಂದಲೇ ಟೀಕೆಗೆ ಒಳಗಾಗಿರುವುದು ನಿಜಕ್ಕೂ ಅಘಾತಕಾರಿ ಸಂಗತಿಯಾಗಿದೆ.

RELATED ARTICLES

Related Articles

TRENDING ARTICLES