Tuesday, February 4, 2025

ಕನ್ನಡಿಗರ ಮೇಲೆ ಹೆಚ್ಚಾಯ್ತು ಹಿಂದಿ ಭಾಷಿಕರ ದಬ್ಬಾಳಿಕೆ !

ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಕನ್ನಡಿಗರ ಮೇಲೆ ಹಿಂದಿ ಭಾಷಿಕರ ದಬ್ಬಾಳಿಕೆ ಹೆಚ್ಚಾಗುತ್ತಿದ್ದು. ಕನ್ನಡಿಗ ಡೆಲಿವರು ಬಾಯ್​ಗೆ ಚಾಕುವಿನಿಂದ ಇರಿಯಲು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

ಚಿಕ್ಕಬಾಣಾವರದ ಗಬ್ರು ಹೋಟೆಲ್​ನಲ್ಲಿ ಘಟನೆ ನಡೆದಿದ್ದು. ನಾರ್ಥ್​ ಇಂಡಿಯನ್ಸ್​ಗಳು ಈ ಹೋಟೆಲ್​ ನಡೆಸುತ್ತಿದ್ದರು. ನಿನ್ನೆ ಡೆಲವರಿ ಬಾಯ್​  ಆರ್ಡರ್​ ಪಿಕ್​ ಮಾಡಲು ಈ ಹೋಟೆಲ್​​ಗೆ ಹೋಗಿದ್ದಾನೆ. ಈ ವೇಳೆ ಒಂದು ಗಂಟೆಗಳ ಕಾಲ ಕಾಯ್ದರು ಕೂಡ ಹೋಟೆಲ್​ ಸಿಬ್ಬಂದಿಗಳು ಆರ್ಡರ್​ ನೀಡಿಲ್ಲ. ಈ  ವೇಳೆ ಡೆಲವರಿ ಬಾಯ್​ ಯಾಕೆ ಎಂದು ಕೇಳಿದ್ದಾನೆ.

ಇದನ್ನೂ ಓದಿ:ರಾಕಿಂಗ್​ ಸ್ಟಾರ್​ ಯಶ್​ಗೆ ಮದುವೆ ಆಮಂತ್ರಣ ನೀಡಿದ ಡಾಲಿ

ಈ ವೇಳೆ ಹಿಂದಿಯಲ್ಲಿ ಮಾತನಾಡುತ್ತಿದ್ದ ಹೋಟೆಲ್​ ಸಿಬ್ಬಂದಿಗಳಿಗೆ ಡೆಲವರಿ ಬಾಯ್​​ ಕನ್ನಡದಲ್ಲಿ ಮಾತನಾಡಿ ಎಂದು ಹೇಳಿದ್ದಾನೆ. ಈ ವೇಳೆ ಉದ್ರಿಕ್ತರಾದ ಹೋಟೆಲ್​ ಸಿಬ್ಬಂದಿಗಳು ಡೆಲವರಿ ಬಾಯ್​ ಮೇಲೆ ಹಲ್ಲೆ ನಡೆಸಿದ್ದು. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇಷ್ಟಕ್ಕೆ ಸಾಲದೆ ಚಾಕುವಿನಿಂದ ಇರಿಯಲು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ಕುರಿತು ಸಾಮಾಜಿಕ ಜಾಲತಾಣ ಎಕ್ಷ್​ನಲ್ಲಿ ಪೋಸ್ಟ್​ ಮಾಡಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು. ಹಿಂದಿ ಭಾಷಿಕರ ದಬ್ಬಾಳಿಕೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.

 

RELATED ARTICLES

Related Articles

TRENDING ARTICLES