ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರು ಟ್ರಾಫಿಕ್ನಿಂದಾಗಿ ಇಡೀ ಪ್ರಪಂಚದಲ್ಲೆ ಪ್ರಖ್ಯಾತಿ ಗಳಿಸಿದೆ. ಈ ಟ್ರಾಫಿಕ್ ಬೇಸತ್ತಿದ್ದ ದ್ವಿಚಕ್ರ ವಾಹನ ಸವಾರರು ತಮ್ಮ ವಾಹನಗಳನ್ನು ಪುಟ್ಬಾತ್ ಮೇಲೆ ಹತ್ತಿಸಿಕೊಂಡು ಸವಾರಿ ಮಾಡುತ್ತಾರೆ. ಇದೀಗ ಸಂಚಾರಿ ಪೊಲೀಸರು ಇದಕ್ಕೆ ಕಡಿವಾಣ ಹಾಕಲು ಮುಂದಾಗಿದ್ದು. ಇನ್ಮುಂದೆ ಪುಟ್ಪಾತ್ ಮೇಲೆ ವಾಹನ ಹತ್ತಿಸುವವರ ಲೈಸೆನ್ಸ್ ಕ್ಯಾನ್ಸಲ್ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಹೌದು.. ಟ್ರಾಫಿಕ್ ಸಮಸ್ಯೆ ಎಂದು ಇನ್ನುಮುಂದೆ ವಾಹನಗಳನ್ನು ಪುಟ್ಪಾತ್ ಮೇಲೆ ಹತ್ತಿಸುವವರಿಗೆ ಕಡಿವಾಣ ಹಾಕಲು ಸಂಚಾರಿ ಪೊಲೀಸರು ಮುಂದಾಗಿದ್ದಾರೆ. ಈ ಹಿಂದೆ ಪುಟ್ಪಾತ್ ಮೇಲೆ ವಾಹನ ಹತ್ತಿಸುವ ಸವಾರರ ಮೇಲೆ ಸಂಚಾರಿ ಪೊಲೀಸರು ದಂಡಾಸ್ತ್ರ ಪ್ರಯೋಗಿಸುತ್ತಿದ್ದರು. ನಂತರ ಸಿಗ್ನಲ್ಗಳಲ್ಲಿ ನಿಂತುಕೊಂಡು ಅಭಿಯಾನಗಳನ್ನು ಆರಂಭಿಸಿದ್ದರು. ಆದರೆ ಇವುಗಳಿಂದ ವಾಹನ ಸವಾರರ ಮೇಲೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ :ನಾನೇ ರಾಜ್ಯಧ್ಯಕ್ಷನಾಗುತ್ತೇನೆ ಎಂಬ ಸಂಪೂರ್ಣ ವಿಶ್ವಾಸವಿದೆ: ಬಿ.ವೈ ವಿಜಯೇಂದ್ರ
ಪುಟ್ ಪಾತ್ ಮೇಲೆ ವಾಹನ ಹತ್ತಿಸಿ ಪಾದಾಚಾರಿಗಳ ಪ್ರಾಣಕ್ಕೆ ಕುತ್ತು ತಂದಿಟ್ಟಿದ್ದವರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದು. ಇನ್ನು ಮುಂದೆ ಪುಟ್ಪಾತ್ ಮೇಲೆ ವಾಹನ ಹತ್ತಿಸುವವರ ಲೈಸೆನ್ಸ್ ಕ್ಯಾನ್ಸಲ್ ಮಾಡಿ ಕ್ರಮ ಕೈಗೊಳ್ಳಲು ಸಂಚಾರಿ ಪೊಲೀಸರು ಮುಂದಾಗಿದ್ದು. ಪದೇ ಪದೇ ರೂಲ್ಸ್ ಬ್ರೇಕ್ ಮಾಡುವ ಸವಾರರು ಇನ್ನು ಮುಂದೆ ಎಚ್ಚರದಿಂದ ಇರಬೇಕಾಗುತ್ತದೆ.