Sunday, February 23, 2025

ಮೋದಿ, ಅಮಿತ್​ ಷಾ ಮಾಡಿರುವ ಪಾಪವನ್ನು ತೊಳಿಯೋಕೆ ಆಗಲ್ಲ : ಸಂತೋಷ್​​ ಲಾಡ್​

ಹುಬ್ಬಳ್ಳಿ : ಜೈಪುರ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ್​ ಖರ್ಗೆ ಹೇಳಿದ್ದ ಹೇಳಿಕೆಗೆ ಧ್ವನಿಗೂಡಿಸಿದ ಕಾರ್ಮಿಕ ಸಚಿವ ಸಂತೋಷ್​ ಲಾಡ್, ಮೋದಿ ಮತ್ತು ಷಾ ಮಾಡಿರುವ ಪಾಪವನ್ನು ಎಲ್ಲಿ ಹೋದರು ತೊಳಿಯೋಕೆ ಹಾಗಲ್ಲ. ಗಂಗಾ ಸ್ನಾನ ಮಾಡಿದ ತಕ್ಷಣ ಅವರ ಪಾಪ ಕಡಿಮೆ ಆಗಲ್ಲ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಲಾಡ್​ ‘ ಮೋದಿ, ಅಮಿತ್ ಷಾ ಸೇರಿಕೊಂಡು ಈ ದೇಶದ ಆರ್ಥಿಕ ವ್ಯವಸ್ಥೆಯನ್ನು ಮೂಲೆ ಗುಂಪು ಮಾಡಿದ್ದಾರೆ. ಇವರ ಪಾಲಿಸಿಗಳಿಂದ ದೇಶದಲ್ಲಿ ಎರಡು ಲಕ್ಷ ಕಿರಾಣಿ ಅಂಗಡಿಗಳು ಮುಚ್ಚಿಹೋಗಿವೆ. ಇದರ ಬಗ್ಗೆ ಯಾರೂ ಮಾತನಾಡಲ್ಲ. ಖರ್ಗೆ ಸಾಹೇಬರು ಮಾತನಾಡಿರುವುದು ಸರಿಯಿದೆ.

ಇದನ್ನೂ ಓದಿ : ಹೆಲ್ಮೆಟ್​ ಧರಿಸಿ ಸಾಲ ವಸೂಲಾತಿಗೆ ಬಂದ ಮೈಕ್ರೋಫೈನಾನ್ಸ್​ ಸಿಬ್ಬಂದಿ !

ಬಿಜೆಪಿಯವರು ದೇಶದ ಸಾಲದ ಬಗ್ಗೆ ಮಾತನಾಡಲ್ಲ. ನಾನೊಬ್ಬ ಹಿಂದೂ ಆಗಿ ಹೇಳ್ತೀನಿ. ಮೋದಿ, ಅಮಿತ್​ ಶಾ ಮಾಡಿರುವ ಪಾಪವನ್ನು ಎಲ್ಲಿ ಹೋದರು ತೊಳಿಯಲು ಸಾಧ್ಯವಾಗಲ್ಲ. ವಾಟ್ಸ್​ಆಪ್​ ಯೂನಿರ್ವಸಿಟಿ ಫೈನಲ್​ ಅಲ್ಲ. ಇದನ್ನು ದೇಶದ ಯುವ ಜನರು ಅರ್ಥ ಮಾಡಿಕೊಳ್ಳಬೇಕು. ಈ ದೇಶ ಕಾಂಗ್ರೆಸ್​ ಅಥವಾ ಬಿಜೆಪಿಯವರ ಆಸ್ತಿಯಲ್ಲ ಎಂದು ಹೇಳಿದರು.

ಕೇಂದ್ರದ ಬಜೆಟ್​ ಬಗ್ಗೆ ಮಾತನಾಡಿದ ಲಾಡ್​ ‘ ಈ ಬಜೆಟ್​ ಬಗ್ಗೆ ಯಾವುದೇ ನಿರೀಕ್ಷೆ ಇಲ್ಲ. ಇವರಿಗೆ ಹಿಂದು-ಮುಸ್ಲೀಂ ಸೆಂಟಿಮೆಂಟ್​ ಬಿಟ್ಟರೆ ಬೇರೆ ಏನು ಗೊತ್ತಿಲ್ಲ. ಹಿಂದೂಗಳಿಗೆ ಏನಾಗಿದೆ ಎಂದು ಡಿಟೇಲ್ಸ್​ ಕೊಡ್ತಾರಾ. ಜಿಡಿಪಿ ಬೆಳವಣಿಗೆ ಹೇಗಿದೆ ಎಂದು ಡಿಟೇಲ್ಸ್​ ಕೊಡ್ತಾರ. ಯಾರದೋ ದುಡ್ಡು, ಎಲ್ಲಮ್ಮನ ಜಾತ್ರೆ ಎಂಬಂತೆ ಬಿಜೆಪಿ ಸ್ಥಿತಿಯಾಗಿದೆ, ಇವರು ಲಾಂಚ್​ ಮಾಡಿದ ಮೇಕ್​ ಇನ್​ ಇಂಡಿಯಾ ಏನಾಗಿದೆ ಎಂದು ಬಿಜೆಪಿಯವರ ಮೇಲೆ ಖಾರವಾಗಿ ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES