Sunday, October 27, 2024

ಮನ್​ ಕೀ ಬಾತ್​ನಲ್ಲಿ ಸೈಬರ್​​ ಕೈಂ ಬಗ್ಗೆ ಜಾಗೃತಿ ಮೂಡಿಸಿದ ಪ್ರಧಾನಿ

ದೆಹಲಿ : ನರೇಂದ್ರ ಮೋದಿಯವರ 115 ನೇ ಮನ್​ ಕೀ ಬಾತ್​ ನಲ್ಲಿ ವಿವಿಧ ವಿಷಯಗಳ ಬಗ್ಗೆ ಜಾಗೃತಿ ಮೂಡಿಸರು. ಅನಿಮೇಷನ್​ನಲ್ಲಿ ಭಾರತದ ಸ್ವಾವಲಂಬನೆ, ಸೈಬರ್​ ಕೈಂ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ನರೇಂದ್ರ ಮೋದಿ ಮಾತನಾಡಿದರು. ಅದರಲ್ಲಿ ವಿಶೇಷವಾಗಿ ಕರ್ನಾಟಕದ ವಿಜಯಪುರ ಜಿಲ್ಲೆಯ ಯುವಕನನ್ನು ಪ್ರಸ್ತಾಪಿಸಿ ಮಾತನಾಡಿದರು.

ಸಪ್ಟೆಂಬರ್ 16 ರಂದು ವಿಜಯಪುರ ಸಂತೋಷ ಪಾಟೀಲ್​ ಎಂಬ ಯುವಕನಿಗೆ ವಂಚಕರು ವಾಟ್ಸಪ್​ ಕರೆ ಮೂಲಕ ಆತನನ್ನು ಡಿಜಿಟಲ್​ ಅರೆಸ್ಟ್​ ಮಾಡಿದ್ದರು. ಸಂತೋಷ ಪಾಟೀಲ್ ಆ ಕರೆಯನ್ನು ರೆಕಾರ್ಡ್​ ಮಾಡಿಕೊಂಡಿದ್ದನು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​​ ಆಗಿತ್ತು. ರೆಕಾರ್ಡ ಮಾಡಿಕೊಂಡಿದ್ದ ವಿಡಿಯೋವನ್ನು ಸಂತೋಷ ಪಾಟೀಲ್ ಸೈಬರ್​ ಪೋಲಿಸರಿಗೆ ನೀಡಿ ದೂರು ದಾಖಲು ಮಾಡಿದ್ದನು. 

ಇಂದು ಪ್ರಧಾನಿ ನರೇಂದ್ರ ಮೋದಿಯವರ 115 ನೇ ಮನ್​ ಕೀ ಬಾತ್  ಕಾರ್ಯಕ್ರಮದಲ್ಲಿ ಈ ಪ್ರಕರಣ ಉಲ್ಲೇಖಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಸೈಬರ್​ ವಂಚಕರ ಬಗ್ಗೆ ಎಚ್ಚರವಾಗಿರುವಂತೆ ಸಲಹೆ ನೀಡಿದರು.

RELATED ARTICLES

Related Articles

TRENDING ARTICLES