Wednesday, October 16, 2024

ಕಾಂಗ್ರೆಸ್​ನವರು ಸಿಎಂ ಆಗೋದಕ್ಕೆ ಸ್ಮಶಾನದಲ್ಲಿ ಪೂಜೆ ಮಾಡಿಸ್ತಿದ್ದಾರೆ ಎಂದು ಹೇಳಿಕೆ ನೀಡಿದ ಆರ್.ಅಶೋಕ್

ಬೆಂಗಳೂರು : ಕಾಂಗ್ರೆಸ್ ನಲ್ಲಿನ ಸಿಎಂ ಕುರ್ಚಿ ಫೈಟ್ ಗೆ ಪ್ರತಿಪಕ್ಷ ನಾಯಕ ಅಶೋಕ್ ಟಾಂಗ್ ನೀಡಿದ್ದು. ಡಿಸೆಂಬರ್ ನಲ್ಲಿ ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ ಅಂತಾ ಅವ್ರ ಸ್ವಾಮೀಜಿ ಹೇಳಿದ್ದಾರೆ. ಡಿಸೆಂಬರ್ ನಲ್ಲಿ ಸಿಎಂ ಆದರೆ ಆದಂಗೆ ಇಲ್ಲ ಅಂದರೆ ಇಲ್ಲ ಅಂದಿದ್ದಾರೆ. ಅದಕ್ಕಾಗಿ ಡಿಕೆ ಶಿವಮೊಗ್ಗದಲ್ಲಿ ಹೋಮ ಹವನ ಮಾಡಿಸ್ತಿದ್ದಾರೆ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಆರ್. ಅಶೋಕ್ ಸಿದ್ದರಾಮಯ್ಯರನ್ನು ಇಳಿಸಿ ಸಿಎಂ ಆಗೋಕೆ ತಮಿಳುನಾಡಿನಲ್ಲಿ ಡಿಕೆಶಿ ಪೂಜೆ ಮಾಡಿಸ್ತಿದ್ದಾರೆ. ಎಲ್ಲರೂ ಸಿಎಂ ರೇಸ್​ಗೆ ಇಳಿದಿದ್ದಾರೆ. ಡಿ.ಕೆ ಶಿವಕುಮಾರ್ ರೀತಿಯಲ್ಲಿಯೆ ಸತೀಶ್ ಜಾರಕಿಹೊಳಿ ಸಿಎಂ ಆಗೋದಕ್ಕೆ ಸ್ಮಶಾನದಲ್ಲಿ ಪೂಜೆ ಮಾಡಿಸ್ತಿದ್ದಾರೆ. ಪರಮೇಶ್ವರ್ ಸಿಎಂ ಆಗೋದಕ್ಕೆ, ಸಿದ್ದಗಂಗಾ ಮಠದಲ್ಲಿ ಪೂಜೆ ಮಾಡಿಸ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬೆಳಗಾವಿ ಸಚಿವರು ಅಂತೂ ಫುಲ್ ರೋಡ್ ಶೋ ಮಾಡುತ್ತಿದ್ದಾರೆ. ಕೊಡಗು, ಚಾಮರಾಜನಗರ, ಚಿಕ್ಕಮಗಳೂರಲ್ಲಿ ಶಾಸಕರ ಸಭೆಗಳು ರೋಡ್ ಶೋ ರೀತಿ ಮಾಡ್ತಿದ್ದಾರೆ ನಾನೇ ಸಿಎಂ, ನಾನೇ ಸಿಎಂ ಅಂತ ಯಾರು ಹೇಳ್ತಿದ್ದಾರೆ.?ಡಿಕೆಶಿ ಇವರ ಹೇಳಿಕೆಗಳಿಗೆ ಕಡಿವಾಣ ಹಾಕ್ತೀನಿ, ನೋಟಿಸ್ ಕೊಡ್ತೀವಿ ಅಂತ ಹೇಳಿದರು, ಆದರೆ ಕಾಂಗ್ರೆಸ್ ನಲ್ಲಿ ಯಾವ ಕಡಿನೂ ಇಲ್ಲ, ವಾಣನೂ ಇಲ್ಲ. ಇಷ್ಟೆಲ್ಲ ಇದ್ದರು ಸಹ ಕಾಂಗ್ರೆಸ್​ನವರು ನಮ್ಮ ಬಗ್ಗೆ ಮಾತನಾಡುತ್ತಾರೆ. ನಿಮ್ಮ‌ ತಟ್ಟೆಯಲ್ಲಿ ಸತ್ತ ಹೆಣ ಬಿದ್ದಿದೆ.ಬಿಜೆಪಿ ತಟ್ಟೆಯ ನೊಣ ಹುಡುಕಲು ಬರುತ್ತಿದ್ದೀರಿ ಎಂದು ಟಾಂಗ್ ನೀಡಿದರು.

 

RELATED ARTICLES

Related Articles

TRENDING ARTICLES