ಶಿವಮೊಗ್ಗ : ಹಸುವಿನ ಕುತ್ತಿಗೆಗೆ ಹಗ್ಗ ಬಿಗಿದು ಸಾಯಿಸಿದ ಘಟನೆ ನಗರದಲ್ಲಿ ನಡೆದಿದ್ದು. ಗೋಶಾಲೆಗೆ ಸೇರಿದ ಹಸುವನ್ನು ಕಿಡಿಗೇಡಿಗಳು ಕೊಂದಿದ್ದು. ನೇಣೂ ಹಾಕಿದ ಸ್ಥಿತಿಯಲ್ಲಿ ಹಸುವಿನ ಮೃತ ದೇಹ ಪತ್ತೆಯಾಗಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕುವೆಂಪು ಶಾಲೆಯ ಬಳಿ ಘಟನೆ ನಡೆದಿದ್ದು. ಹೊಸನಗರದಲ್ಲಿ ರಮೀತ್ ಎಂಬುವವರು ಗೋಶಾಲೆ ನಡೆಸುತ್ತಿದ್ದು ಅಪಘಾತದಲ್ಲಿ ಕಾಲು ಕಳೆದುಕೊಂಡ ಅಥವಾ ಗಾಯಗೊಂಡ ಹಸು, ಕರು ಮತ್ತು ಬೀಡಾಡಿ ಹಸುಗಳನ್ನು ತಮ್ಮ ಗೋಶಾಲೆಯಲ್ಲಿ ಸಾಕುತ್ತಿದ್ದರು.
ಕಳೆದ ಭಾನುವಾರ ಹಸುಗಳಿಗೆ ಆಹಾರ ಹಾಕಿದ್ದ ಗೋಶಾಲೆ ಸಂಚಾಲಕರು ತಮ್ಮ ಮನೆಗಳಿಗೆ ಹೋಗಿದ್ದರು. ಈ ಸಮಯದಲ್ಲಿ ಕೊಟ್ಟಿಗೆಗೆ ನುಗ್ಗಿರುವ ದುರುಳರು ಹಸುವನ್ನು ಎಳೆದುಕೊಂಡು ಹೋಗಿ ಹಸುವಿನ ಕುತ್ತಿಗೆಗೆ ಹಗ್ಗ ಬಿಗಿದು ಬಾವಿಗೆ ನೇಣು ಹಾಕಿದ ಸ್ಥಿತಿಯಲ್ಲಿ ಬಿಟ್ಟು ಹೋಗಿದ್ದಾರೆ. ಸ್ಥಳಕ್ಕೆ ಪೋಲಿಸರು ಮತ್ತು ಅಗ್ನಿಶಾಮಕ ದಳದವರು ಬಂದು ಪರಿಶೀಲನೆ ನಡೆಸಿದ್ದಾರೆ.