Wednesday, October 9, 2024

ಪೋಲಿಸ್ ಠಾಣೆಗೆ ಬಂದು ಅಧಿಕಾರಿಗಳಿಗೆ ಅವಾಜ್ ಹಾಕಿದ ಪುಂಡ

ಬೆಂಗಳೂರು : ಭಾನುವಾರ (ಅ.06) ಶ್ರೀ ರಾಂಪುರ ಪೋಲಿಸ್ ಠಾಣೆಗೆ ಬಂದ ಪುಂಡನೊರ್ವ ಪೋಲಿಸರಿಗೆ ಅವಾಜ್ ಹಾಕಿರುವ ಘಟನೆ ನಗರದಲ್ಲಿ ನಡೆದಿದೆ. ಕುಡಿದ ನಶೆಯಲ್ಲಿದ್ದ ಯುವಕನಿಂದ ಈ ಕೃತ್ಯವಾಗಿದ್ದು. ಪೋಲಿಸ್ ಠಾಣೆಯ ಮುಂದೆ ಮಲಗಿ ಹೈಡ್ರಾಮ ಮಾಡಿದ್ದಾನೆ.

ಯುವಕನನ್ನು ಹೊರ ರಾಜ್ಯದ ಯುವಕನೆಂದು ಗುರುತಿಸಿದ್ದು. ಕುಡಿದ ನಶೆಯಲ್ಲಿ ಗಲಾಟೆ ಮಾಡಿದ್ದಾನೆ. ಕಾಲಿನ ಮೇಲೆ ಕಾಲು ಹಾಕಿ ಕುಳಿತು ಗಲಾಟೆ ಮಾಡಿದರು ಪೋಲಿಸರು ಮಾನವೀಯತೆಯಿಂದ ಯುವಕನಿಗೆ ಬಾಳೆಹಣ್ಣು, ಊಟ ನೀಡಿದ್ದಾರೆ. ಆದರೆ ಊಟ ನಿರಾಕರಿಸಿದ ಯುವಕ ಫೋಲಿಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ನಂತರ ಪೋಲಿಸ್ ಠಾಣೆಯ ಮುಂದೆ ಮಲಗಿ ಹೈಡ್ರಾಮ ಮಾಡಿದ್ದಾನೆ

ಶ್ರೀರಾಂಪುರ ಪೋಲಿಸ್ ಠಾಣೆಯಲ್ಲಿ ಘಟನೆ ನಡೆದಿದ್ದು. ಭಾನುವಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ಅನ್ಯರಾಜ್ಯದವರ ಪುಂಡಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

 

 

 

RELATED ARTICLES

Related Articles

TRENDING ARTICLES