Sunday, October 6, 2024

ಪ್ರವಾಸಕ್ಕೆಂದು ತೆರಳಿದ್ದ ಬಾಲಕನೊರ್ವ ಬಲಿ : ಮೋಜು ಮಸ್ತಿ ಮಾಡುವ ಮುನ್ನ ಇರಲಿ ಎಚ್ಚರ

ಕಾರವಾರ : ಸಮುದ್ರದ ಅಲೆಗೆ ಸಿಲುಕಿ ಬಾಲಕನೊರ್ವ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ನಡೆದಿದೆ. ಬೆಂಗಳೂರಿಂದ ಪ್ರವಾಸಕ್ಕೆಂದು ತೆರಳಿದ್ದ ವಿಧ್ಯಾರ್ಥಿಗಳು ಸಮುದ್ರದಲ್ಲಿ ಮೋಜು ಮಸ್ತಿ ಮಾಡುವ ವೇಳೆ ಈ ಘಟನೆ ನಡೆದಿದೆ.

ಬೆಂಗಳೂರಿನ ವಿಧ್ಯಾ ಸೌದ ಪ್ರಥಮ ದರ್ಜೆ ಕಾಲೇಜಿನ ವಿಧ್ಯಾರ್ಥಿಗಳು ಪ್ರವಾಸಕ್ಕೆಂದು ತೆರಳಿದ್ದ ವೇಳೆ ಈ ಅವಘಡ ನಡೆದಿದ್ದು 220ಕ್ಕೂ ಹೆಚ್ಚು ವಿಧ್ಯಾರ್ಥಿಗಳು ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ಆಗಮಿಸಿದ್ದರು. ಗೌತಮ್ (17) ಎಂಬ ವಿಧ್ಯಾರ್ಥಿಯು ಮೃತ ಪಟ್ಟಿದ್ದಾನೆ.

ಸಮುದ್ರದ ಅಲೆಯಲ್ಲಿ ಮೋಜು ಮಸ್ತಿ ಮಾಡುವ ಸಂಧರ್ಭದಲ್ಲಿ ಘಟನೆ ಘಟಿಸಿದ್ದು. ಒಬ್ಬ ವಿಧ್ಯಾರ್ಥಿ ಮೃತಪಟ್ಟಿದ್ದರೆ ಮತ್ತೊಬ್ಬ ವಿಧ್ಯಾರ್ಥಿ ಧನುಶ್​ನನ್ನು ಸ್ಥಳಿಯ ಲೈಫ್ ಗಾರ್ಡ್ ಸಿಬ್ಬಂಧಿಗಳು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸ್ಥಳಕ್ಕೆ ಮುರುಡೇಶ್ವರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

 

RELATED ARTICLES

Related Articles

TRENDING ARTICLES