ಬೆಂಗಳೂರು : ಸಾಹುಕಾರ್ ರಮೇಶ್ ಜಾರಕಿಹೊಳಿ ಅವರ ಒಡೆತನದ ಲಕ್ಷ್ಮಿ ನಿವಾಸ ಮನೆಯನ್ನು ಮಾರಾಟ ಮಾಡಲು ಮುಂದಾಗಿದ್ದು. 45 ಕೋಟಿಗೆ ಮನೆಯನ್ನು ಯಾರು ಬೇಕಾದರು ಕೊಂಡುಕೊಳ್ಳಬಹುದಾಗಿದೆ. ಕಳೆದ ಒಂದು ವರ್ಷದಿಂದ ಮಾರಾಟವಾಗದೆ ಹಾಗೆ ಉಳಿದಿರೋ ಭಾಗ್ಯಲಕ್ಷ್ಮಿ ಮನೆ.
ಆಪರೇಶನ್ ಕಮಲದ ಮೂಲಕ ಸಚಿವರಾದ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಸದಾಶಿವನಗರದಲ್ಲಿ ಈ ಮನೆಯನ್ನು ಖರೀದಿಸಿದ್ದರು. ಡಿ.ಕೆ ಶಿವಕುಮಾರ್ ಅವರ ನಿವಾಸದ ಹಿಂದಿನ ರಸ್ತೆಯಲ್ಲೇ ಈ ಮನೆಯನ್ನು37 ಕೋಟಿ ಹಣಕ್ಕೆ ಖರೀದಿಸಿದ್ದರು. ಈ ಮನೆಯನ್ನು ಖರೀದಿ ಮಾಡಿದ ನಂತರ ರಮೇಶ್ ಜಾರಕಿಹೊಳಿಯ ಅವನತಿ ಆರಂಭಗೊಂಡಿತ್ತು.
ಈ ಮನೆಯ ಖರೀದಿಯ ನಂತರ ಸಾಹುಕಾರ್ ತಮ್ಮ ಸಚಿವ ಸ್ಥಾನವನ್ನು ಕಳೆದುಕೊಂಡಿದ್ದರು. ಮಾನಹಾನಿಯನ್ನು ಅನುಭವಿಸಬೇಕಾಯಿತು. ಬಳಿಕ ಜೋತಿಷ್ಯದ ಮೊರೆಯೋದ ರಮೇಶ್ ಜಾರಕಿಹೊಳಿಯವರಿಗೆ ಮನೆಯನ್ನು ಮಾರಿಬಿಡುವಂತೆ ಜೋತಿಷ್ಯರು ಸಲಹೆ ನೀಡಿದ್ದರು. ಅವರ ಸಲಹೆಯಂತೆ ಕಳೆದ ಒಂದು ವರ್ಷದಿಂದ ರಮೇಶ್ ಜಾರಕಿಹೊಳಿಯವರು ತಮ್ಮ ಮನೆಯನ್ನು ಮಾರಾಟಕ್ಕೆ ಇಟ್ಟಿದ್ದಾರೆ.
ರಮೇಶ್ ಜಾರಕಿಹೊಳಿ ಮನೆ ಖರೀದಿಸುವ ಮುಂಚೆ, ಇಬ್ಬರು ಒಂದು ವರ್ಷದೊಳಗೆ ಮನೆ ಖಾಲಿ ಮಾಡಿ, ಮಾರಾಟ ಮಾಡಿದ್ದರು. ಇದರಿಂದಾಗಿ ಕಡಿಮೆ ಬೆಲೆಗೆ ಮನೆ ಸಿಕ್ಕಿದೆ ಎಂದು ರಮೇಶ್ ಜಾರಕಿಹೊಳಿ ಮನೆ ಖರೀದಿ ಮಾಡಿದ್ದರು. ತಮ್ಮ ರಾಜಕೀಯ ವಿರೋಧಿ ಡಿ.ಕೆ ಶಿವಕುಮಾರ್ ಗೆ ಟಕ್ಕರ್ ಕೊಡಲು ಅವರ ಮನೆಯ ಪಕ್ಕದಲ್ಲಿಯೆ ಈ ಮನೆಯನ್ನು ಖರೀದಿಸಿದ್ದರು.