ಬೆಂಗಳೂರು : ನೆನ್ನೆ (ಅ.03) ಮೈಸೂರಿನಲ್ಲಿ ಸಿಎಂ ಪರ ಬ್ಯಾಟ್ ಬೀಸಿದ ಜಿಟಿ. ದೇವೆಗೌಡರ ವಿರುದ್ಧ ಇಂದು ಬಿಜೆಪಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾಧಿ ನಾರಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಜಿಟಿ. ದೇವೆಗೌಡರು ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಅವರು ಎನ್ಡಿಎ ಸದಸ್ಯರೆಂಬುದನ್ನು ಮರೆತಿದ್ದಾರೆ. ಅವರಿಗೆ ಮೂಡಾ ಅಕ್ರಮ ಸಣ್ಣ ಘಟನೆ ಎನಿಸಿರಬಹುದು. ಆದರೆ ಮೂಡಾ ಅಕ್ರಮ ಕೇವಲ 14 ಸೈಟ್ಗಳ ಅಕ್ರಮವಲ್ಲ, ಅಲ್ಲಿ ಸಾವಿರಾರು ಸೈಟ್ಗಳ ಹಗರಣ ನಡೆದಿದೆ. ಇವುಗಳ ತನಿಖೆ ನಡೆದರೆ ಎಲ್ಲವೂ ಹೊರಗೆ ಬರುತ್ತದೆ. ಹಾಗಾಗಿ ಜಿ.ಟಿ. ದೇವೆಗೌಡ ಸಿಎಂ ಪರ ನಿಂತಿದ್ದಾರೆ ಎಂದು ಪರೋಕ್ಷವಾಗಿ ಅವರನ್ನು ಹಗರಣದ ಪಾಲುದಾರರು ಎಂದು ಬಿಂಬಿಸಿದರು.
ಸಿಎಂ ಅವರು ನಾನು ಬಗ್ಗಲ್ಲ, ನಾನು ಕುಗ್ಗಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಕೋರ್ಟ್ ಬಹಳ ಸ್ಟ್ರಾಂಗ್ ಇದೆ, ಅಂಬೇಡ್ಕರ್ ಅವರ ಸಂವಿಧಾನ ಗಟ್ಟಿ ಇದೆ. ಸಂವಿಧಾನ ಎಲ್ಲರನ್ನು ಬಗ್ಗಿಸುತ್ತದೆ ಎಂದು ಹೇಳಿದರು.
ತಾಯಿ ಚಾಮುಂಡಿ ಒಂದು ವರ್ಷ ಅಧಿಕಾರದಲ್ಲಿ ಮುಂದುವರಿಸ್ತಾರೆ ಎಂದು ಸಿಎಂ ಹೇಳುತ್ತಿದ್ದಾರೆ. ಸಿಎಂಗೆ ಕುಂಕುಮ ಕಂಡ್ರೂ ಆಗಲ್ಲ, ಖಾವಿ ಕಂಡ್ರೂ ಆಗಲ್ಲ. ಎರಡು ದಿನದಿಂದ ಚಾಮುಂಡಿ ತಾಯಿ ಅಂತ ಹೇಳ್ತಿದ್ದಾರೆ. ದೇವರು ಕಂಡ್ರೆ ಆಗದವರು ತಾಯಿ ಎಂದು ಹೇಳುತ್ತಿದ್ದಾರೆ ಎಂದು ಸಿಎಂ ಅವರಿಗೆ ರಾಜೀನಾಮೆ ಕೊಡಲು ಹೇಳಿದರು.