Sunday, October 6, 2024

ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಜೆಡಿಎಸ್ ಶಾಸಕ ಜಿ.ಟಿ ದೇವೆಗೌಡ

ಮೈಸೂರು : ದಸರಾ ಉದ್ಘಾಟನೆ ಸಮಾರಂಭದಲ್ಲಿ ಶಾಸಕ ಜಿ.ಟಿ. ದೇವೇಗೌಡ ಸಿದ್ದರಾಮಯ್ಯನವರ ಪರ ಬ್ಯಾಟ್ ಬೀಸಿದ್ದು. ಸಿದ್ದರಾಮಯ್ಯನವರು ಚಾಮುಂಡಿ ದೇವಿಯ ವರಪುತ್ರ. ಚಾಮುಂಡೇಶ್ವರಿ ಕ್ಷೇತ್ರದಿಂದ ಸಿದ್ದರಾಮಯ್ಯ ಅವರು ರಾಜಕೀಯ ಆರಂಭಿಸಿ ಇಲ್ಲಿಯವರೆಗೆ ಬೆಳೆದಿದ್ದಾರೆ.

ಚಾಮುಂಡಿ ದೇವಿಯ ಆಶೀರ್ವಾದ ಮತ್ತು ಜನರ ಆಶೀರ್ವಾದ ದಿಂದ ಎರಡು ಬಾರಿ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ – ಜೆಡಿಎಸ್ ಇಬ್ಬರು ಸೇರಿ ಅವರನ್ನು ಸೋಲಿಸಲು ಯತ್ನಿಸಿದೆವು. ಆದರೆ, ಚಾಮುಂಡಿ ಆಶೀರ್ವಾದ ದಿಂದ ಸಿದ್ದರಾಮಯ್ಯ ಅವತ್ತು ಗೆದ್ದರು. ಜೋಡೆತ್ತಿನ ರೀತಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ದುಡಿದು ಸರ್ಕಾರ ರಚಿಸಿದ್ದಾರೆ. ಒಬ್ಬ ದಲಿತ ನಾಯಕ ಹೆಚ್.ಸಿ ಮಹದೇವಪ್ಪನನ್ನು

ಸಿಎಂ ಪರ ಬ್ಯಾಟ್ ಬೀಸಿದ ಜಿಟಿಡಿ, ಎಲ್ಲರೂ ಸಿಎಂ ರಾಜೀನಾಮೆ ಕೇಳುತ್ತಿದ್ದಾರೆ. ತಾಕತ್ತಿದ್ದರೆ ಎಫ್ಐಆರ್ ದಾಖಲಾಗಿರುವವರೆಲ್ಲಾ ರಾಜೀನಾಮೆ ಕೊಡಿ. ಎಂದು ದೋಸ್ತಿ ನಾಯಕರಿಗೆ ಟಾಂಗ್ ನೀಡಿದರು. ಇದರಿಂದಾಗಿ ವೇದಿಕೆ ಮೇಲಿದ್ದ ಸಿಎಂ ಖುಷಿಯಾದರು.

ಕುಮಾರಸ್ವಾಮಿ ಅವರ ಮೇಲೂ ಎಫ್​ಐಆರ್ ಆಗಿದೆ ಅವರು ರಾಜೀನಾಮೆ ನೀಡುತ್ತಾರ. ರಾಜೀನಾಮೆ ನೀಡಲು ಕೋರ್ಟ್ ಹೇಳಿದ್ಯಾ. ಕೇಂದ್ರ ಸಚಿವರಾದವರಿಗೆ ಅಷ್ಟು ಜವಬ್ದಾರಿ ಬೇಡ್ವಾ ಎಂದು ಹೇಳಿದರು.

136 ಸ್ಥಾನ ಗೆದ್ದು ಸಿಎಂ ಆಗಿರುವ ಸಿದ್ಧರಾಮಯ್ಯ ರಾಜೀನಾಮೆ ನೀಡುತ್ತಾರ ? ರಾಜೀನಾಮೆ ಕೊಡಿ, ರಾಜೀನಾಮೆ ಕೊಡಿ? ಎಂದು ಕೇಳಿದರೆ ಕೊಡುವುದ್ದಕ್ಕೆ ಆಗಿತ್ತಾಎಂದು ಪ್ರಶ್ನಿಸದರು. ಒಂದು ಅತ್ಯಾಚಾರ ಒಂದು ಕೊಲೆಯನ್ನು ಮೂರು ತಿಂಗಳು ಮಾಧ್ಯಮದವರು ತೋರಿಸುತ್ತಾರೆ . ಒಂದು ಎಫ್ಐಆರ್ ನಾ ಎಷ್ಟು ದಿನ ತೋರಿಸುತ್ತಾರೆ ಎಂದು ಹೇಳಿದರು.

ಯಾರ ಯಾರ ಮೇಲೆ ಎಫ್ಐಆರ್ ಆಗಿದೆ ಅವರೆಲ್ಲಾ ರಾಜೀನಾಮೆ ಕೊಡಿ. ಎಲ್ಲಾ ವಿಧಾನಸೌದದ ಮುಂದೆ ಬಂದು ನಿಂತುಕೊಳ್ಳಿ ನೋಡೊಣಾ ಇವುಗಳನ್ನೆಲ್ಲಾ ಬಿಟ್ಟು ರಾಜ್ಯಕ್ಕೆ ಕೇಂದ್ರದಿಂದ ಏನು ತರಬೇಕೊ ಅದನ್ನು ನೋಡಿ. ಅದನ್ನು ಬಿಟ್ಟು ಬರೀ ರಾಜೀನಾಮೆ ಕೇಳುತ್ತಾ ಕೂತರೆ ಹೇಗೆ ? ಎಂದು ಪ್ರಶ್ನಿಸಿದರು.

RELATED ARTICLES

Related Articles

TRENDING ARTICLES