Saturday, October 5, 2024

ಆಗಸ್ಟ್​ನಲ್ಲಿ ಮೋದಿ ಸರ್ಕಾರ ಪಥನ ಹೇಳಿಕೆ: ಲಾಲೂ ಪ್ರಸಾದ್​ ನರಿ ಬುದ್ದಿಯ ವ್ಯಕ್ತಿ-ಗೋವಿಂದ ಕಾರಜೋಳ ಕಿಡಿ

ವಿಜಯಪುರ: ಆಗಸ್ಟ್​​ನಲ್ಲಿ ಮೋದಿ ಸರ್ಕಾರ ಪತನವಾಗಲಿದೆ ಎಂದು ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್​ ಯಾದವ್​ ನೀಡಿರುವ ಹೇಳಿಕೆಗೆ ಸಂಸದ ಗೋವಿಂದ ಕಾರಜೋಳ ಪ್ರತಿಕ್ರಿಯೆ ನೀಡಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಲಾಲು ಪ್ರಸಾದ್​ ಅವರು ಹಗಲು ಕನಸು ಕಾಣುತ್ತಿದ್ದಾರೆ, ಅವರ ಕನಸು ನನಸಾಗಲು ಸಾಧ್ಯವೇ ಇಲ್ಲ, ಲಾಲು ಪ್ರಸಾದ್​ ಅವರದ್ದು ನರಿ ಬುದ್ದಿ ಎಂದು ಕಿಡಿಕಾರಿದರು.

ಇದನ್ನೂ ಓದಿ: ಆಮ್ಲೆಟ್​ನಲ್ಲಿ ಕಲ್ಲು ಸಿಕ್ಕಿದ್ದನ್ನು ಪ್ರಶ್ನಿಸಿದ್ದಕ್ಕೆ ಗ್ರಾಹಕನ ಮೇಲೆ ಬಿಯರ್​ ಬಾಟಲಿಯಿಂದ ಹಲ್ಲೆ

ಬಳಿಕ, ರಾಹುಲ್​ ಗಾಂಧಿ ಹಿಂದೂ ಧರ್ಮದ ಬಗ್ಗೆ ಅವಹೇಳನಕಅರಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ರಾಹುಲ್ ಗಾಂಧಿ ಒಬ್ಬರು ಅಪ್ರಬುದ್ದ ನಾಯಕ, ಅರೆಬರೆ ಬೆಂದಿರುವ ನಾಯಕ, ಅವರಿಗೆ ಈ ದೇಶದ ಭಾವನೆ, ಸಂಸ್ಕೃತಿ ಗೊತ್ತಿಲ್ಲ, ಹಿಂದೂಗಳ ಬಗ್ಗೆ ಅಪಮಾನ ಮಾಡುವ ರೀತಿಯಲ್ಲಿ ಮಾತನಾಡುತ್ತಾರೆ, ಅದನ್ನು ನಾವು ಈಗಾಗಲೇ ಖಂಡಿಸಿದ್ದೇವೆ, ಈಗಲೂ ಖಂಡಿಸುತ್ತೇವೆ. ಅವರ ಹೇಳಿಕೆ ಕುರಿತು ಈಗಲೂ ಕ್ಷಮೆ ಯಾಚನೆ ಮಾಡಬೇಕು ಎಂದರು.

RELATED ARTICLES

Related Articles

TRENDING ARTICLES