ಕರ್ನಾಟಕ ರಾಜ್ಯದ ಮಂಗಳೂರು ಹೆದ್ದಾರಿಯಲ್ಲಿ ಅವಸರವೇ ಅಪಘಾತಕ್ಕೆ ಕಾರಣ ಎಂಬ ಎಚ್ಚರಿಕೆಯ ಬೋರ್ಡ್ ಹಾಕಲಾಗಿದೆ. ಅದರ ಕೆಳಗೆ ಇಂಗ್ಲಿಷ್ನಲ್ಲಿ ಅನುವಾದ ಮಾಡಿರುವ ಸಾಲುಗಳನ್ನು ಕೂಡ ಹಾಕಲಾಗಿದ್ದು, ಗೂಗಲ್ ಟ್ರಾನ್ಸಲೇಟ್ ಮಾಡಿರುವ ಭೂಪರು ಈ ಕನ್ನಡದ ವಾಕ್ಯವನ್ನು Urgent make an Accident ಎಂದು ಅನುವಾದಿಸಿದ್ದಾರೆ. ಈ ಬೋರ್ಡ್ನ ಫೋಟೋ ಸಾಮಾಜಿಕ ಜಾಲತಾಣವಾದ ಎಕ್ಸ್ನಲ್ಲಿ ಭಾರೀ ಟ್ರೋಲ್ ಆಗುತ್ತಿದೆ.
ಮಂಗಳೂರು ಹೆದ್ದಾರಿಯಲ್ಲಿನ ಈ ಬೋರ್ಡ್ನ ಫೋಟೋವನ್ನು ಎಕ್ಸ್ನಲ್ಲಿ ಕೊಡಗು ಕನೆಕ್ಟ್ ಪೇಜ್ ಪೋಸ್ಟ್ ಮಾಡಿದೆ. ಈ ಪೋಸ್ಟನ್ನು ನೂರಾರು ಜನರು ರೀಟ್ವೀಟ್ ಮಾಡಿದ್ದು, ವೈರಲ್ ಆಗಿದೆ.
ಇದನ್ನೂ ಓದಿ: ವರಲಕ್ಷ್ಮಿ ಶರತ್ಕುಮಾರ್ ರಿಸಪ್ಷನ್ನಲ್ಲಿ ಮಿಂಚಿದ ಕಿಚ್ಚ ಸುದೀಪ್ ಕುಟುಂಬ!
ಕೊಡಗು ಕನೆಕ್ಟ್’ ಹೆಸರಿನ ಸಾಮಾಜಿಕ ಮಾಧ್ಯಮ ಬಳಕೆದಾರರು ಸೈನ್ಬೋರ್ಡ್ನ ಚಿತ್ರವನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಸೈನ್ಬೋರ್ಡ್ನ ಕನ್ನಡ ಬರಹದ ಇಂಗ್ಲಿಷ್ ಅನುವಾದವನ್ನು “ತುರ್ತಾಗಿ ಅಪಘಾತ ಮಾಡಿ” ಎಂದು ಬರೆಯಲಾಗಿದೆ. ಇದನ್ನು ಇಂಗ್ಲಿಷ್ನಲ್ಲಿ Overspeeding is the reason for Accidents ಎಂದು ಬರೆಯುವ ಬದಲು Urgent make an Accident ಎಂದು ಅನುವಾದಿಸಲಾಗಿದೆ.