ಹಾಸನ: ವಿಧಾನ ಪರಿಷತ್ನ ಸದಸ್ಯ ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ಪ್ರಕರಣ ದಾಖಲಾಗಿದ್ದು, ದೂರಿನ ಆಧಾರದ ಮೇಲೆ ಸೂರಜ್ ಬಂಧನವಾಗಿದೆ. ಇನ್ನು ಸೂರಜ್ ವಿರುದ್ದ ದಾಖಲಾಗಿರುವ ಕೇಸ್ ವಿಚಾರಣೆಗೆ ತನಿಖಾಧಿಕಾರಿ ನೇಮಿಸಲಾಗಿದೆ.
ಸೂರಜ್ ಪ್ರಕರಣದ ತನಿಖೆಗೆ ಸಕಲೇಶಪುರ DySP ಪ್ರಮೋದ್ ಕುಮಾರ್ ಅವರನ್ನು ನೇಮಿಸಲಾಗಿದೆ. ಹೊಳೆನರಸೀಪುರ ಪೊಲೀಸರು ಸಂತ್ರಸ್ತ ನೀಡಿರುವ ದೂರಿನ ವಿಚಾರಣೆ ನಡೆಸಿದ್ದಾರೆ. ಹೊಳೆನರಸೀಪುರ ನಗರ CPI ಪ್ರದೀಪ್ ಕುಮಾರ್ ವಿಚಾರಣೆ ನಡೆಸಿದ್ದರು. ಬಳಿಕ ತನಿಖಾಧಿಕಾರಿಯನ್ನು ನೇಮಿಸಲಾಗಿದ್ದು, ಪ್ರಮೋದ್ ಕುಮಾರ್ ವಿಚಾರಣೆ ನಡೆಸಿದ್ದರು. ಬಳಿಕ ವಶಕ್ಕೆ ಪಡೆಯುವ ಸಾಧ್ಯತೆ ಇದೆ.
377, 506, 342 ಸೆಕ್ಷನ್ಗಳ ಅಡಿಯಲ್ಲಿ ಕೇಸ್:
ಸೂರಜ್ ರೇವಣ್ಣ ವಿರುದ್ಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. IPC ಸೆಕ್ಷನ್ 377, 506 ಹಾಗೂ 342 ಸೆಕ್ಷನ್ಗಳ ಅಡಿ ದೂರು ದಾಖಲಾಗಿದೆ. ಅಸಹಜ ಲೈಂಗಿಕ ದೌರ್ಜನ್ಯ ಹಿನ್ನೆಲೆ 377 ಸೆಕ್ಷನ್ ಹಾಕಲಾಗಿದೆ. ಕೊಲೆ ಬೆದರಿಕೆ ಆರೋಪ ಹಿನ್ನೆಲೆ 506, ಬಲವಂತದಿಂದ ಬಂಧಿಸಿಟ್ಟಿದ್ದ ಆರೋಪ ಹಿನ್ನೆಲೆ 342ನೇ ಸೆಕ್ಷನ್ ಅಡಿ ಕೇಸ್ ದಾಖಲಾಗಿದೆ.
ಸೂರಜ್ ಕೇಸ್ನ್ನು ಸಿಐಡಿ ತನಿಖೆ ನಡೆಸುತ್ತಾ?
ಸೂರಜ್ ರೇವಣ್ಣ ಕೇಸ್ನ್ನು ಸಿಐಡಿ ತನಿಖೆ ನಡೆಸಲಿದೆಯಾ ಎಂಬ ಪ್ರಶ್ನೆ ಮೂಡಿದೆ. ನಾಳೆ ಈ ಬಗ್ಗೆ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆಯಿದೆ. ಕಾರ್ಯಕರ್ತನಿಗೆ ಅಸಹಜ ಲೈಂಗಿಕ ದೌರ್ಜನ್ಯ ಸಂಬಂಧ ಸಿಐಡಿ ಅಧಿಕಾರಿಗಳು ತನಿಖೆ ನಡೆಯುವ ಸಾಧ್ಯತೆಯಿದೆ. ನಾಳೆ ಸಿಐಡಿಗೆ ವಹಿಸಿ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸುತ್ತಾರಾ ಕಾದುನೋಡಬೇಕಿದೆ.