ಬೆಂಗಳೂರು: ನಟಿ ನಿವೇದಿತಾ ಗೌಡ ಅವರು ಗಾಯಕ ಚಂದನ್ ಶೆಟ್ಟಿ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಅನೇಕ ವದಂತಿಗಳು ಹುಟ್ಟಿಕೊಂಡವು. ಅವುಗಳ ಬಗ್ಗೆ ಸ್ಪಷ್ಟನೆ ನೀಡಲು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.
ಇನ್ನು ಜೂನ್ 6ಕ್ಕೆ ಡಿವೋರ್ಸ್ಗೆ ನಾವು ಅರ್ಜಿ ಸಲ್ಲಿಸಿದ್ದೆವು. ಕಾನೂನಾತ್ಮಕವಾಗಿ ಕೋರ್ಟ್ ವಿಚ್ಛೇದನ ನೀಡಿದೆ. ನನ್ನ ಜೀವನ ಶೈಲಿಯೇ ಬೇರೆ, ನಿವೇದಿತಾರ ಜೀವನ ಶೈಲಿಯೇ ಬೇರೆ. ಒತ್ತಾಯವಾಗಿ ಇರೋದು ಸರಿಯಲ್ಲವೆಂದು ವಿಚ್ಛೇದನ ಪಡೆದ್ವೀ. ಕೆಲವೊಂದು ವಿಚಾರಕ್ಕೆ ಪ್ರತಿನಿತ್ಯ ಮನಸ್ತಾಪ ಬರ್ತಿತ್ತು. ಅದಕ್ಕೆ ಕ್ಲಾರಿಫಿಕೇಶನ್ ನೀಡಲು ಸುದ್ದಿಗೋಷ್ಠಿ ಕರೆದಿದ್ದೇವೆ.
ಒಬ್ಬರಿಗೊಬ್ಬರು ಪರಸ್ಪರ ಗೌರವ ಕೊಟ್ಟು ಇರಬೇಕು. ನಿವೇದಿತಾ ನನ್ನ ಬಳಿ ಜೀವನಾಂಶ ಕೇಳಿಲ್ಲ, ನಾನು ಕೊಟ್ಟಿಲ್ಲ. ಮಕ್ಕಳನ್ನು ಮಾಡಿಕೊಳ್ಳುವ ಬಗ್ಗೆ ವದಂತಿ ಹರಡಿದೆ ಅದು ಕೂಡ ಸುಳ್ಳು ಎಂದು ಸುದ್ದಿಗೋಷ್ಠಿಯಲ್ಲಿ ಚಂದನ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ದೊಡ್ಮನೆಯಲ್ಲಿ ಡಿವೋರ್ಸ್ ಬಿರುಗಾಳಿ: ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ ಯುವರಾಜ್ ಕುಮಾರ್
‘ನನ್ನ ಆಲೋಚನೆ ಬೇರೆ.. ಚಂದನ್ ಆಲೋಚನೆಯೇ ಬೇರೆ’
ನನ್ನ ಹಾಗೂ ಚಂದನ್ ಶೆಟ್ಟಿ ಡಿವೋರ್ಸ್ ಬಳಿಕ ಕೆಲವೊಂದು ವದಂತಿಗಳು ಹರಡಿದ್ದು, ಬಹಳ ಬೇಸರವಾಗಿದೆ. ಇದ್ರಿಂದ ನಮ್ಮ ಫ್ಯಾಮಿಲಿಗಳಿಗೆ ಬೇಸರವಾಗಿದೆ ಎಂದು ನಿವೇದಿತಾ ಗೌಡ ತಿಳಿಸಿದ್ದಾರೆ.
ಈ ಸಂಬಂಧ ಬೆಂಗಳೂರಲ್ಲಿ ಇಬ್ಬರೂ ಒಟ್ಟಿಗೆ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ ನಿವೇದಿತಾ ಗೌಡ, ಪರಸ್ಪರ ಚರ್ಚಿಸಿಯೇ ವಿಚ್ಛೇದನ ಪಡೆದಿದ್ದೇವೆ. ಫಾರಿನ್ಗೆ ಹೋಗ್ತಾಳೆ ಅನ್ನೋದೆಲ್ಲ ಸುಳ್ಳು. ಈ ರೀತಿಯ ಸುಳ್ಳು ಸುದ್ದಿಗಳಿಂದ ನೋವಾಗ್ತಿದೆ. ವದಂತಿ ಹರಡಿಸಿದ್ರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ನಿವೇದಿತಾ ಎಚ್ಚರಿಕೆ ನೀಡಿದ್ದಾರೆ.