Sunday, October 6, 2024

ನನ್ನ ಸಂಹಾರಕ್ಕೆ ನಡೆಯುತ್ತಿದೆ ಶತ್ರು ಭೈರವಿ ಯಾಗ: ಡಿಕೆ ಶಿವಕುಮಾರ್​

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ನನ್ನ ವಿರುದ್ದ ಕೇರಳದಲ್ಲಿ ಶತ್ರು ಭೈರವಿ ಯಾಗವನ್ನು ನಡೆಸಲಾಗುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್​ ಅವರು ತಿಳಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಕೇರಳದಲ್ಲಿ ನನ್ನ ಮೇಲೆ ದೊಡ್ಡ ಪ್ರಯೋಗ ನಡೀತಾ ಇದೆ. ಯಾವ ಪೂಜೆ ನಡೀತಾ ಇದೆ, ಯಾರು ಮಾಡ್ತಾ ಇದ್ದಾರೆ ಇದೆಲ್ಲವು ಗೊತ್ತಿದೆ. ನನ್ನ ಹಾಗೂ ಸಿಎಂ, ಕಾಂಗ್ರೆಸ್​ ಸರ್ಕಾರದ ವಿರುದ್ಧ ಪೂಜೆ ನಡೀತಾ ಇದೆ ಎಂದರು.

ಇದನ್ನೂ ಓದಿ: ಬಂಧನ ಭೀತಿ: ದೇಶಕ್ಕೆ ಆಗಮಿಸುವ ಮುನ್ನವೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ಪ್ರಜ್ವಲ್​ ರೇವಣ್ಣ

ಕೇರಳ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಅಘೋರಿಗಳಿಂದ ನಡೆಯುತ್ತಿರುವ ಈ ಪೂಜೆಯಲ್ಲಿ ಶತ್ರು ಬೈರವಿ ಯಾಗ ನಡೆಯುತ್ತಿದ್ದು ಪಂಚ ಬಲಿ ಕೋಡುತ್ತಿದ್ದಾರೆ. ಇದರಲ್ಲಿ ಮೇಕೆ 21, ಎಮ್ಮೆ 3, ಕುರಿ 21 ಬಲಿ ಕೋಡುತ್ತಿದ್ದಾರೆ.

ಸದ್ಯ ಈಗ ಈ ಯಾಗ ನಡೆಯುತ್ತಿದೆ. ಅವರ ಪ್ರಯತ್ನ ನಡೀತಾ ಇದೆ. ನಾವು ನಂಬಿದ ದೇವರು ನಮ್ಮನ್ನು ಕಾಪಾಡುತ್ತಾನೆ. ಇನ್ನು ಈ ಯಾಗವನ್ನು ಯಾರು ಮಾಡಿಸುತ್ತಿದ್ದಾರೆ ಅಂತ ಗೋತ್ತಿದೆ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES