ಬೆಂಗಳೂರು : ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಹಣದ ಹೊಳೆಯನ್ನೇ ಹರಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಗಂಭಿರ ಆರೋಪ ಮಾಡಿದ್ದಾರೆ.
ಬೆಂಗಳೂರಲ್ಲಿ ನಡೆದ ಬಿಜೆಪಿ ಹಾಗೂ ಜೆಡಿಎಸ್ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ನಮ್ಮ ನಾಯಕರು ಹಲವಾರು ವಿಚಾರ ಮಾತನಾಡಿದ್ದಾರೆ. ಹಾಗಾಗಿ, ಅದೇ ವಿಚಾರಗಳನ್ನ ನಾನು ಮಾತಡಲ್ಲ ಎಂದು ಹೇಳಿದ್ದಾರೆ.
ಅ ದೇವೇಗೌಡರು ನಮ್ಮ ಜನತಾದಳಲ್ಲೇ ಬೆಳದವರು, 1996 ರಲ್ಲಿ ನನ್ನ ಚುನಾವಣೆಗೂ ಅ ದೇವೇಗೌಡರ ಕೆಲಸ ಮಾಡಿದ್ದಾರೆ. ನನ್ನ ಪರವಾಗಿ ಕೆಲಸ ಮಾಡಿದನ್ನ ನಾನು ಮರೆಯಲಾಗದು. ಹಲವಾರು ಇತಿಹಾಸ ಇದೆ, ಈಗ ಎಲ್ಲವನ್ನೂ ಮಾತನಾಡೊಕ್ಕೆ ಆಗಲ್ಲ. ಕಾಂಗ್ರೆಸ್ ನವರು ಈಗಾಗಲೇ ಹಣ ಹೊಳೆ ಹರಿಸುತ್ತಾ ಇದ್ದಾರೆ. ಕಾಂಗ್ರೆಸ್ ಮಾಡ್ತಾ ಇರೋ ಹಣ ನಮ್ಮ ಅಭ್ಯರ್ಥಿ ದೇವೇಗೌಡ ಮಾಡೋಕ್ಕೆ ಕಷ್ಟ ಎಂದು ತಿಳಿಸಿದ್ದಾರೆ.
ಇಲ್ಲಿ ಬಿಜೆಪಿ ಶಾಸಕ ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ನಮ್ಮ ಶಾಸಕರು ಸೇರಿ ಸುಮಾರು 72 ಸಾವಿರ ಮತ ಇದೆ. ಆರ್. ಅಶೋಕ್ ಹೇಳಿದಂತೆ ನಿಮ್ಮ ಜೊತೆಗೆ ಒಂದಷ್ಟು ಜನರನ್ನು ಕರೆದುಕೊಂಡು ಬಂದು ವೋಟು ಹಾಕಿಸಿ. ಮನೆಗೆ ತೆರಳಿ ಎರಡು ಪಕ್ಷದ ಕಾರ್ಯಕರ್ತರನ್ನ ವಿಶ್ವಾಸಗಳಿಸಬೇಕು. ಕಾಂಗ್ರೆಸ್ ಅವರು ಏನಾದರೂ ಆಮಿಷ ತೋರಿಸಿಲಿ. ಇನ್ನ ಕಾಂಗ್ರೆಸ್ ಹಣವನ್ನು ಹೆಚ್ಚಾಗಿ ಖರ್ಚು ಮಾಡ್ತಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಒಂದಾಗಿ ಎಂದು ಕುಮಾರಸ್ವಾಮಿ ಕರೆ ಕೊಟ್ಟಿದ್ದಾರೆ.