ಹಾವೇರಿ : ನಾವು ಗಂಡಸರಲ್ಲ, ಅವರೇ ಗಂಡಸರು. ನಮಗ್ಯಾರಿಗೂ ತಾಕತ್ ಇಲ್ಲ, ಅವರಿಗಿರುವ ತಾಕತ್ ನಮಗಿಲ್ಲ. ನಾವು ಗಂಡಸರು ಅಲ್ಲ, ಹೆಂಗಸರು ಅಲ್ಲ ಎಂದು ಹೆಚ್ಡಿಡಿ ಫ್ಯಾಮಿಲಿ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಿಡಿಕಾರಿದರು.
ರಾಣೇಬೆನ್ನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಡಿಕೆಶಿಯವರ ಕ್ಯಾಸೆಟ್ ಬಗ್ಗೆ ಮಾತನಾಡಿದ್ದಾರೆ. ರೇವಣ್ಣ ಮೂಹುರ್ತ ಇಟ್ಟುಕೊಂಡು ಕ್ಯಾಸೆಟ್ ಬಿಡುಗಡೆ ಮಾಡಲಿ. ನಾನು ಎಲ್ಲದಕ್ಕೂ ರೆಡಿ ಇದ್ದೀನಿ. ಬಿಡುಗಡೆ ಮಾಡಲು ಯಾರು ಬೇಡ ಅಂದಿದಾರೆ? ಅವರ ತಂದೆ ಹೇಳ್ತಿದ್ರು ಅದ್ಯಾವದೋ 9 ವರ್ಷದ ಹೆಣ್ಣು ಮಗಳು ಅಂತ. ಅದನ್ನ ಯಾಕೆ ಇನ್ನೂ ರಿಲೀಸ್ ಮಾಡಲಿಲ್ಲ. ಟೈಂ ಫಿಕ್ಸ್ ಮಾಡಲಿ, ಸುಮ್ಮನೆ ಖಾಲಿ ಮಾತನಾಡೋದು ಬೇಡ ಎಂದು ವಾಗ್ದಾಳಿ ನಡೆಸಿದರು.
ಕುಮಾರಣ್ಣ ಹತಾಶರಾಗಿದ್ದಾರೆ. ದಿನಕ್ಕೆ ಒಂದು ಹೇಳಿಕೆ ಚೇಂಜ್ ಮಾಡ್ತಾರೆ. ಒಂದು ದಿನ ಉಪ್ಪು ತಿಂದವರು ನೀರು ಕುಡಿಬೇಕು ಅಂತಾರೆ. ಮತ್ತೊಂದು ದಿನ ಅವರ ಫ್ಯಾಮಿಲಿ ಬೇರೆ, ನಮ್ಮ ಫ್ಯಾಮಿಲಿ ಬೇರೆ ಅಂತಾರೆ. ಅವರು ಯಾವತ್ತು ಸ್ಥಿಮಿತ ಇಲ್ಲ. ಒಂದು ದಿನ ಕುಟುಂಬದವರಿಗೆ ಟಿಕೆಟ್ ಕೊಡಲ್ಲ ಅಂದ್ರು, ಹಿಂದೆಲ್ಲ ಬಿಜೆಪಿಯವರಿಗೆ ಬೈಯ್ದಿದ್ದಾರೆ. ಒಂದು ದಿನ ನನ್ನ 420 ಅಂತ ಹೇಳ್ತಾ ಇದ್ರು. ಕೋಪದಲ್ಲಿದ್ದಾರೆ, ಶಾಂತವಾಗಲಿ ಆಮೇಲೆ ಚರ್ಚೆ ಮಾಡೋಣ ಎಂದು ಕುಟುಕಿದರು.
ಕುಮಾರಸ್ವಾಮಿ ನಿಮ್ಮ ಪಾರ್ಟನರ್ ಅಲ್ವಾ?
ಕುಮಾರಸ್ವಾಮಿಗೆ ದೇವರಾಜೇಗೌಡ ಭೇಟಿ ಮಾಡಿದ್ನೋ, ಬಿಟ್ನೋ ಗೊತ್ತಿಲ್ಲ. ಪೊಲೀಸರು ಮತ್ತೊಂದು ಎಪ್ ಐಆರ್ ಹಾಕಿದ್ದಾರಂತ ಕೇಳಿದ್ದೇನೆ. ಪೊಲೀಸನವರ ಹತ್ತಿರ ನಾವ್ಯಾಕೆ ಕೆಳೋಣ, ಮಾಧ್ಯಮದಲ್ಲಿ ಬಂದಿದ್ದನ್ನ ನೋಡಿದ್ದೇವೆ. ನನಗೆ ಉತ್ತರ ಬೇಕಾಗಿದ್ದು ಸ್ಥಳೀಯ ಬಿಜೆಪಿ ನಾಯಕರುಗಳ ಕಡೆಯಿಂದ. ಎಲ್ಲರು ಬಾಯಿಗೆ ಬೀಗ ಹಾಕಿ ಕೊಂಡಿದ್ದಾರಲ್ಲ. ಪಾಪ ಕುಮಾರಸ್ವಾಮಿ ಒಬ್ಬನ ಕೈಯಲ್ಲಿ ಯಾಕೆ ಮಾತಾನಾಡಿಸ್ತಿರಿ? ನಿಮ್ಮ ಪಾರ್ಟನರ್ ಅಲ್ವಾ ಕುಮಾರಸ್ವಾಮಿ? ರಾಜಕಾರಣ ಇದು, ರಾಜಕಾರಣ ಅಂದ ಮೇಲೆ ಎಲ್ಲಾ ಬಳಸಿಕೊಳ್ಳೋದೆ, ಅವರು ಬಳಸಿಕೊಳ್ಳಲಿಲ್ವಾ? ಎಂದು ಡಿ.ಕೆ. ಶಿವಕುಮಾರ್ ಚಾಟಿ ಬೀಸಿದರು.